ಈ ಸಂದರ್ಭದಲ್ಲಿ ಫರ್ನಿಚರ್ ಅಂಗಡಿಯ ಸಿಬ್ಬಂದಿ ಅವರನ್ನು ಬಿಡಿಸಲು ಬಂದಿದ್ದರಿಂದ ಅವರಿಗೂ ಹೊಡೆತಗಳು ಬಿದ್ದಿದೆ.
ಬೆಂಗಳೂರು(ಫೆ.10): ಫರ್ನಿಚರ್ ಅಂಗಡಿಯಲ್ಲಿ ಕುಡಿದ ಕೆಲ ಪುಡಿ ರೌಡಿಗಳು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ಮಾರತ್ ಹಯಳ್ಳಿಯಲ್ಲಿ ನಡೆದಿದೆ. ಮಾರತ್ಹಳ್ಳಿ ಬಳಿ ಓಆರ್ ಆರ್ ಫರ್ನಿಚರ್ ಅಂಗಡಿಯಲ್ಲಿ ಕುಡಿದ ಅಮಲಿನಲ್ಲಿ ನುಗ್ಗಿದ ಕೆಲ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಫರ್ನಿಚರ್ ಅಂಗಡಿಯ ಸಿಬ್ಬಂದಿ ಅವರನ್ನು ಬಿಡಿಸಲು ಬಂದಿದ್ದರಿಂದ ಅವರಿಗೂ ಹೊಡೆತಗಳು ಬಿದ್ದಿದೆ. ಇನ್ನು ಕೆ ಎ 01 ಹೆಚ್ ಕೆ 2531 ಎಂಬ ವಾಹನದಲ್ಲಿ ಬಂದಿದ್ದ ಇವರು ಅಲ್ಲಿದ್ದ ಕೆಲ ಫರ್ನಿಚರ್ಗಳನ್ನು ಹಾಳುಗೆಡವಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
