ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಕಳೆದ ಮೊದಲ ರಾತ್ರಿ ಹೀಗಿತ್ತು
ಬಹುಕೋಟಿ ಹಗರಣದಲ್ಲಿ ಬಿರ್ಸಾ ಮುಂಡಾ ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್'ಗೆ ಜೈಲಿನ ಮೊದಲ ರಾತ್ರಿ ಚಪಾತಿ, ದಾಲ್ ಮತ್ತು ಕೋಸಿನ ಪಲ್ಯ ನೀಡಲಾಯಿತು.
ರಾಂಚಿ (ಡಿ.24): ಬಹುಕೋಟಿ ಹಗರಣದಲ್ಲಿ ಬಿರ್ಸಾ ಮುಂಡಾ ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್'ಗೆ ಜೈಲಿನ ಮೊದಲ ರಾತ್ರಿ ಚಪಾತಿ, ದಾಲ್ ಮತ್ತು ಕೋಸಿನ ಪಲ್ಯ ನೀಡಲಾಯಿತು.
ನಮ್ಮ ತಂದೆಗೆ ಹೃದಯ ಸಂಬಂಧಿ ಕಾಯಿಲೆಗಳಿದ್ದು, ಚಪಾತಿ ಬದಲಾಗಿ ಅನ್ನವನ್ನು ನೀಡಿ ಎಂದು ಪುತ್ರ ತೇಜಸ್ವಿ ಯಾದವ್ ಜೈಲಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಲಾಲು ಪ್ರಸಾದ್ ಯಾದವ್'ಗೆ 2014 ರಲ್ಲಿ ಹಾರ್ಟ್ ಸರ್ಜರಿಯಾಗಿದ್ದು, ಅಲ್ಲಿಂದ ಪಥ್ಯದಲ್ಲೇ ಇದ್ದಾರೆ. ಪತ್ನಿ ರಾಬ್ಡಿ ದೇವಿ ಗಂಡನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.