Asianet Suvarna News Asianet Suvarna News

ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರಾ ರೋಹಿಣಿ ಸಿಂಧೂರಿ : ಯಾರಿಗೆ ಸೋಲು- ಯಾರಿಗೆ ಗೆಲುವು..?

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ  ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. 

Rohini Sindhuri fighting transfer battle

ಹಾಸನ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ  ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. 

ಸಿಂಧೂರಿ ಅವರು ಹಾಸನ ಡಿಸಿಯಾಗಿ ಮುಂದುವರಿಯಬೇಕೆ ಅಥವಾ ವರ್ಗವಾಗಬೇಕೆ ಎನ್ನುವುದು ಇಂದು ನಿರ್ಧಾರವಾಗಲಿದೆ. ಅವಧಿಗೂ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮಾರ್ಚ್ 8 ರಂದು  ರೋಹಿಣಿ ಸಿಂಧೂರಿ ಅವರ ಸಿಎಟಿ ಮೊರೆ ಹೋಗಿದ್ದರು.

ಸರ್ಕಾರದ ಆದೇಶಕ್ಕೆ ಈ ಹಿನ್ನೆಲೆಯಲ್ಲಿ ಸಿಎಟಿ ತಡೆ ನೀಡಿತ್ತು. ಮೊದಲು ಮಾರ್ಚ್ 13ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆದ ಬಳಿಕ ಯಾರಿಗೆ ಸೋಲು ಯಾರಿಗೆ  ಗೆಲುವು ಎನ್ನುವ ವಿಚಾರ ತಿಳಿಯಲಿದೆ.

Follow Us:
Download App:
  • android
  • ios