ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರಾ ರೋಹಿಣಿ ಸಿಂಧೂರಿ : ಯಾರಿಗೆ ಸೋಲು- ಯಾರಿಗೆ ಗೆಲುವು..?
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.
ಹಾಸನ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.
ಸಿಂಧೂರಿ ಅವರು ಹಾಸನ ಡಿಸಿಯಾಗಿ ಮುಂದುವರಿಯಬೇಕೆ ಅಥವಾ ವರ್ಗವಾಗಬೇಕೆ ಎನ್ನುವುದು ಇಂದು ನಿರ್ಧಾರವಾಗಲಿದೆ. ಅವಧಿಗೂ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮಾರ್ಚ್ 8 ರಂದು ರೋಹಿಣಿ ಸಿಂಧೂರಿ ಅವರ ಸಿಎಟಿ ಮೊರೆ ಹೋಗಿದ್ದರು.
ಸರ್ಕಾರದ ಆದೇಶಕ್ಕೆ ಈ ಹಿನ್ನೆಲೆಯಲ್ಲಿ ಸಿಎಟಿ ತಡೆ ನೀಡಿತ್ತು. ಮೊದಲು ಮಾರ್ಚ್ 13ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆದ ಬಳಿಕ ಯಾರಿಗೆ ಸೋಲು ಯಾರಿಗೆ ಗೆಲುವು ಎನ್ನುವ ವಿಚಾರ ತಿಳಿಯಲಿದೆ.