Asianet Suvarna News Asianet Suvarna News

ಅಬಕಾರಿಗೂ ವಿಜಯಲಕ್ಷ್ಮೀಗೂ ಏನು ಸಂಬಂಧ? ಪತ್ರಕರ್ತರ ಪ್ರಶ್ನೆಗೆ ರೇಣುಕಾಚಾರ್ಯ ಗರಂ

ನನಗೆ ಉತ್ತರ ಕೊಡುವಲ್ಲಿ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿಯಿಂದ ನೀವು ಪ್ರಶ್ನೆ ಕೇಳಬೇಕು ಅಂತ ತಾಕೀತು ಮಾಡಿದರು. ನಾನು ಇಲಾಖೆಯ ಸಚಿವನಾಗಿ,ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದರು.

renukacharya reaction to journalists question

ಬಳ್ಳಾರಿ(ಡಿ.20): ಅಬಕಾರಿ ಇಲಾಖೆಗೂ ವಿಜಯಲಕ್ಷ್ಮೀ ಎಂಬ ಹೆಸರಿಗೆ ಏನು ಸಂಬಂಧ? ಇದು ಪತ್ರಕರ್ತರೊಬ್ಬರು ಬಳ್ಳಾರಿಯಲ್ಲಿ ಮಾಜಿ ಸಚಿವ ರೇಣಕಾಚಾರ್ಯ ಕೇಳಿದ ಪ್ರಶ್ನೆ.  ಪತ್ರಕರ್ತರ ಈ ಪ್ರಶ್ನೆಗೆ ಕೆಂಡಾಮಂಡಲರಾದ ರೇಣುಕಾಚಾರ್ಯ,ವಾಗ್ವಾದ ನಡೆಸಿದರು. ನಾನು ಇಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಆ ಬಗ್ಗೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು.

ನನಗೆ ಉತ್ತರ ಕೊಡುವಲ್ಲಿ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿಯಿಂದ ನೀವು ಪ್ರಶ್ನೆ ಕೇಳಬೇಕು ಅಂತ ತಾಕೀತು ಮಾಡಿದರು. ನಾನು ಇಲಾಖೆಯ ಸಚಿವನಾಗಿ,ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದರು.

ಮಾಜಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರೊಂದಿಗೆ ರಾಸಲೀಲೆಯಲ್ಲಿ ಭಾಗಿಯಾಗಿದ್ದಾಳೆ ಎನ್ನುವ ಮಹಿಳೆಯ ಹೆಸರು ವಿಜಯಲಕ್ಷ್ಮೀ, ಈ ಹಿಂದೆ ನರ್ಸ್‌ ಜಯಲಕ್ಷ್ಮೀ-ರೇಣುಕಾಚಾರ್ಯ ಪೋಟೋಗಳು ಭಾರೀ  ವೈರಲ್‌ ಆಗಿದ್ದವು.