Asianet Suvarna News Asianet Suvarna News

ಒಪ್ಪಿಕೊಂಡಿದ್ದ ಎಂಟಿಬಿ ಮತ್ತೆ ಮುಂಬೈ ವಿಮಾನ ಏರಲು 3 ಕಾರಣ

ಶನಿವಾರ ಇಡೀ ದಿನ ರಾಜಕೀಯ ಪ್ರಹಜಸನ ನಡೆದಿತ್ತು. ರಾಜೀನಾಮೆ ನೀಡಿದ ಎಂಟಿಬಿ ನಾಗರಾಜ್ ಮನವೊಲಿಕೆಗೆ ಕಾಂಗ್ರೆಸ್ ಅಗ್ರ ನಾಯಕರ ಆದಿಯಾಗಿ ಹಲವರು ಪರಿಪರಿಯಾಗಿ ಪ್ರಯತ್ನ ಮಾಡಿದ್ದರು. ಆದರೆ ಇಂದು ಇಡೀ ಚಿತ್ರಣವೇ ಬದಲಾಗಿಹೋಗಿದೆ.

Rebel Congress MLA MTB Nagaraj Fly to Mumbai
Author
Bengaluru, First Published Jul 14, 2019, 5:25 PM IST

ಬೆಂಗಳೂರು(ಜು. 14) ರಾಜೀನಾಮೆ ಕೊಟ್ಟಿದ್ದ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಏರಿದ್ದು ಹೊಟೆಲ್ ನಲ್ಲಿ ಅತೃಪ್ತರ ಪಡೆ ಸೇರಿಕೊಂಡಿದ್ದಾರೆ. ಹಾಗಾದರೆ ಎಂಟಿಬಿ ನಾಗರಾಜ್ ಕೊನೆಗೂ ಕೈಕೊಡಲು ಕಾರಣವೇನು?

ಪುತ್ರನ ರಾಜಕಾರಣದ ಭವಿಷ್ಯ: ಲೋಕಸಭಾ ಚುನಾವಣೆ ಫಲಿತಾಂಶ ಸಹಜವಾಗಿಯೇ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ತಂದಿದ್ದು. ಸುರಕ್ಷಿತ ಪ್ರದೇಶವನ್ನು ಅವರುಸುತ್ತಿದ್ದರು. ತಮ್ಮ ಪುತ್ರನಿಗೆ ಉತ್ತಮ ರಾಜಕೀಯ ಭವಿಷ್ಯ ರೂಪಿಸಲು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇಲಾಖೆಯಲ್ಲಿ ಹಸ್ತಕ್ಷೇಪ: ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ವಿರುದ್ಧ  ಕಿಡಿಕಾರಿದ್ದ  ಎಂಟಿಬಿ  ತಮ್ಮ ಖಾತೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದಿದ್ದರು.  

ಮೂಲ ಕಾಂಗ್ರೆಸ್ ಕಡೆಗಣನೆ: ಸಮ್ಮಿಶ್ರ ಸರಕಾರಲ್ಲಿ ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಮಾಡಲಾಗುತ್ತಿದೆ ಎಂಬ  ಮಾತುಗಳು ಕೇಳಿಬಂದಿದ್ದವು. ಹಲವು ಸಂದರ್ಭದಲ್ಲಿ ಇದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿದ್ದವು.

Follow Us:
Download App:
  • android
  • ios