Asianet Suvarna News Asianet Suvarna News

ಭೂಪರಿವರ್ತನೆ, ನೋಂದಣಿ ನಿಯಮ ಬದಲಾವಣೆ: ನಿವೇಶನ ದರ ಶೇ.30 ದುಬಾರಿ!

ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾ​ಗುವಂತಹ ಹೊಸ ನಿಯಮವನ್ನು ಏಪ್ರಿಲ್‌ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾ​ಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿ​ಯನ್ನು ಎಕರೆ ಅಥವಾ ಗುಂಟೆ ಪರಿಮಾಣ​ದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣ​ದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃ​ದ್ಧಿ​ಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತ​ವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗ​ಸೂಚಿ ದರವು ಹಾಲಿ ಪ್ರಮಾ​ಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.

Rate Of Plots Increased Up to 30 Present

ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾ​ಗುವಂತಹ ಹೊಸ ನಿಯಮವನ್ನು ಏಪ್ರಿಲ್‌ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾ​ಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿ​ಯನ್ನು ಎಕರೆ ಅಥವಾ ಗುಂಟೆ ಪರಿಮಾಣ​ದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣ​ದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃ​ದ್ಧಿ​ಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತ​ವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗ​ಸೂಚಿ ದರವು ಹಾಲಿ ಪ್ರಮಾ​ಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.

ಈ ಕುರಿತು ಅಧಿ​ಸೂಚನೆಯನ್ನು ಇತ್ತೀಚೆಗೆ ಹೊರಡಿಸ ಲಾಗಿದ್ದು, ನಿಯಮ ಏಪ್ರಿಲ್‌ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ, ಅಭಿವೃದ್ಧಿ​ಗೊಂಡ ನಿವೇಶ ನದ ಬೆಲೆಯೇ, ಪರಿವರ್ತನೆ​ಯಾದ ಜಮೀನಿಗೂ ಅನ್ವಯ​ವಾಗುವಂತೆ ಮಾಡಿ ಮಾರ್ಗಸೂಚಿ ದರ ಪರೋ ಕ್ಷವಾಗಿ ಏರಿಕೆ​ಯಾಗುವಂತೆ ಮಾಡಲಾಗಿದೆ. ಹೀಗಾಗಿ ಇದರಿಂದ ಬೆಂಗಳೂರು ಸೇರಿ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಮಾರ್ಗ ಸೂಚಿ ದರ ಪರೋಕ್ಷವಾಗಿ ಶೇ. 10ರಿಂದ 30ರಷ್ಟುಹೆಚ್ಚಾಗಲಿದೆ. ಈ ಹೊಸ ನಿಯಮ ವನ್ನು ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ವಿಶೇಷ ಸೂಚನೆ​ಯಡಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಮೌಲ್ಯಮಾಪನ ಕೇಂದ್ರ ಸಮಿತಿ ಒಪ್ಪಿಗೆ ಪಡೆದು ಅದೇಶ ಹೊರಡಿಸಲಾಗಿದೆ. ಈ ನಿಯಮ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ , ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.

ಪರಿಣಾಮವೇನು?: ಈ ಹೊಸ ನಿಯಮದಿಂದ ಡೆವಲ ಪರ್‌ಗಳು ಪರಿವರ್ತನೆಯಾದ ಕೃಷಿ ಜಮೀನುಗಳನ್ನೂ ನಿವೇಶನ ದರದಲ್ಲಿ ಖರೀದಿಸಬೇಕಾಗುತ್ತದೆ. ನಂತರ ಬಡಾವಣೆ ನಿರ್ಮಿಸಲು ವಿವಿಧ ಹಂತದಲ್ಲಿ ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಈ ಎಲ್ಲಾ ದರ ಹೆಚ್ಚಳ ಹಾಗೂ ನಾಗರೀಕ ಸೌಲಭ್ಯಗಳಿಗೆ ಬಿಡುವ ಖಾಲಿ ಜಾಗದ ವೆಚ್ಚ ವನ್ನು ಆತ ಲಭ್ಯವಾಗುವ ನಿವೇಶನಗಳಿಂದಲೇ ಪಡೆಯ ಬೇಕಾಗುತ್ತದೆ. ಹೀಗಾಗಿ ನಿವೇಶನದ ದರ ಹೆಚ್ಚಾಗಲಿದೆ. 
ಮಾರ್ಗಸೂಚಿ ದರ ಶೇ.30 ಹೆಚ್ಚು!: ಹೊಸ ನಿಯಮ ದಂತೆ ಬೆಂಗಳೂರಿನ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇಷನ್‌ ಪ್ರದೇಶವನ್ನು ಉದಾಹರಣೆಗೆ ತೆಗೆದುಕೊಳ್ಳೋಣ.

-ಹಳೇ ನಿಯಮದಂತೆ ಬ್ಯಾಟರಾಯನಪುರ, ಜಕ್ಕೂರು ಪ್ಲಾಂಟೇಷನ್‌ ಪ್ರದೇಶದಲ್ಲಿ ಎಕರೆಗೆ .8.25 ಕೋಟಿ ಮಾರ್ಗಸೂಚಿ ದರವಿದೆ. ಅದರ ನೋಂದಣಿಗೆ ಮಾರ್ಗ ಸೂಚಿ ದರ ಶೇ.65ರಷ್ಟುಹೆಚ್ಚುವರಿ ಅಂದರೆ ಎಕರೆಯ ಮಾರ್ಗಸೂಚಿ ದರ .13.62 ಕೋಟಿ ಆಗುತ್ತದೆ.

-ಅದೇ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇ ಷನ್‌ ಪ್ರದೇಶದಲ್ಲಿ (ಎಕರೆ ಬದಲು ಚ. ಮೀಟರ್‌ ಮತ್ತು ಅಭಿವೃದ್ಧಿ ಹೊಂದಿದ ಜಮೀನೆಂದು ಪರಿಗಣಿಸಬೇಕು) ಚ.ಮೀ. .1,30,000 ಮಾರ್ಗ ಸೂಚಿ ದರವಿದೆ.

-ಇದರಲ್ಲಿ ಮಾರ್ಗಸೂಚಿ ದರದ ಶೇ.30ರಷ್ಟುಎಂದರೆ ಚದರ ಮೀಟರ್‌ಗೆ .40,000 ಆಗುತ್ತದೆ. ಅದೇ ರೀತಿ ಎಕರೆಗೆ (ಎಕರೆಗೆ 4047 ಚ.ಮೀಟರ್‌ಗಳು) . 13.62 ಕೋಟಿ ಬದಲು .15.78 ಕೋಟಿ ಆಗುತ್ತದೆ. ಅಂದರೆ ಎಕರೆ ಲೆಕ್ಕಾಚಾರಕ್ಕೂ, ಚದರ ಮೀಟರ್‌ ಲೆಕ್ಕಾಚಾರಕ್ಕೂ ಶೇ.13ರಷ್ಟುಹೆಚ್ಚಾಗುತ್ತದೆ.

-ಇದೇರೀತಿ ಗೊಟ್ಟಿಗೆರೆ ಮತ್ತು ಕೆಂಗೇರಿ ಸುತ್ತಮುತ್ತ ನೋಡಿದರೆ ಶೇ.30 ವರೆಗೂ ಏರಿಕೆಯಾಗುತ್ತದೆ. ಇತರ ಮಹಾನಗರಗಳಲ್ಲೂ ಈ ರೀತಿ ದರ ಏರಿಕೆಯಾಗಲಿದೆ.

ವರದಿ: ಕನ್ನಡಪ್ರಭ

Follow Us:
Download App:
  • android
  • ios