ಭೂಪರಿವರ್ತನೆ, ನೋಂದಣಿ ನಿಯಮ ಬದಲಾವಣೆ: ನಿವೇಶನ ದರ ಶೇ.30 ದುಬಾರಿ!
ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾಗುವಂತಹ ಹೊಸ ನಿಯಮವನ್ನು ಏಪ್ರಿಲ್ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿಯನ್ನು ಎಕರೆ ಅಥವಾ ಗುಂಟೆ ಪರಿಮಾಣದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃದ್ಧಿಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗಸೂಚಿ ದರವು ಹಾಲಿ ಪ್ರಮಾಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.
ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾಗುವಂತಹ ಹೊಸ ನಿಯಮವನ್ನು ಏಪ್ರಿಲ್ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿಯನ್ನು ಎಕರೆ ಅಥವಾ ಗುಂಟೆ ಪರಿಮಾಣದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃದ್ಧಿಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗಸೂಚಿ ದರವು ಹಾಲಿ ಪ್ರಮಾಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.
ಈ ಕುರಿತು ಅಧಿಸೂಚನೆಯನ್ನು ಇತ್ತೀಚೆಗೆ ಹೊರಡಿಸ ಲಾಗಿದ್ದು, ನಿಯಮ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ, ಅಭಿವೃದ್ಧಿಗೊಂಡ ನಿವೇಶ ನದ ಬೆಲೆಯೇ, ಪರಿವರ್ತನೆಯಾದ ಜಮೀನಿಗೂ ಅನ್ವಯವಾಗುವಂತೆ ಮಾಡಿ ಮಾರ್ಗಸೂಚಿ ದರ ಪರೋ ಕ್ಷವಾಗಿ ಏರಿಕೆಯಾಗುವಂತೆ ಮಾಡಲಾಗಿದೆ. ಹೀಗಾಗಿ ಇದರಿಂದ ಬೆಂಗಳೂರು ಸೇರಿ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಮಾರ್ಗ ಸೂಚಿ ದರ ಪರೋಕ್ಷವಾಗಿ ಶೇ. 10ರಿಂದ 30ರಷ್ಟುಹೆಚ್ಚಾಗಲಿದೆ. ಈ ಹೊಸ ನಿಯಮ ವನ್ನು ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ವಿಶೇಷ ಸೂಚನೆಯಡಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಮೌಲ್ಯಮಾಪನ ಕೇಂದ್ರ ಸಮಿತಿ ಒಪ್ಪಿಗೆ ಪಡೆದು ಅದೇಶ ಹೊರಡಿಸಲಾಗಿದೆ. ಈ ನಿಯಮ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ , ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.
ಪರಿಣಾಮವೇನು?: ಈ ಹೊಸ ನಿಯಮದಿಂದ ಡೆವಲ ಪರ್ಗಳು ಪರಿವರ್ತನೆಯಾದ ಕೃಷಿ ಜಮೀನುಗಳನ್ನೂ ನಿವೇಶನ ದರದಲ್ಲಿ ಖರೀದಿಸಬೇಕಾಗುತ್ತದೆ. ನಂತರ ಬಡಾವಣೆ ನಿರ್ಮಿಸಲು ವಿವಿಧ ಹಂತದಲ್ಲಿ ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಈ ಎಲ್ಲಾ ದರ ಹೆಚ್ಚಳ ಹಾಗೂ ನಾಗರೀಕ ಸೌಲಭ್ಯಗಳಿಗೆ ಬಿಡುವ ಖಾಲಿ ಜಾಗದ ವೆಚ್ಚ ವನ್ನು ಆತ ಲಭ್ಯವಾಗುವ ನಿವೇಶನಗಳಿಂದಲೇ ಪಡೆಯ ಬೇಕಾಗುತ್ತದೆ. ಹೀಗಾಗಿ ನಿವೇಶನದ ದರ ಹೆಚ್ಚಾಗಲಿದೆ.
ಮಾರ್ಗಸೂಚಿ ದರ ಶೇ.30 ಹೆಚ್ಚು!: ಹೊಸ ನಿಯಮ ದಂತೆ ಬೆಂಗಳೂರಿನ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇಷನ್ ಪ್ರದೇಶವನ್ನು ಉದಾಹರಣೆಗೆ ತೆಗೆದುಕೊಳ್ಳೋಣ.
-ಹಳೇ ನಿಯಮದಂತೆ ಬ್ಯಾಟರಾಯನಪುರ, ಜಕ್ಕೂರು ಪ್ಲಾಂಟೇಷನ್ ಪ್ರದೇಶದಲ್ಲಿ ಎಕರೆಗೆ .8.25 ಕೋಟಿ ಮಾರ್ಗಸೂಚಿ ದರವಿದೆ. ಅದರ ನೋಂದಣಿಗೆ ಮಾರ್ಗ ಸೂಚಿ ದರ ಶೇ.65ರಷ್ಟುಹೆಚ್ಚುವರಿ ಅಂದರೆ ಎಕರೆಯ ಮಾರ್ಗಸೂಚಿ ದರ .13.62 ಕೋಟಿ ಆಗುತ್ತದೆ.
-ಅದೇ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇ ಷನ್ ಪ್ರದೇಶದಲ್ಲಿ (ಎಕರೆ ಬದಲು ಚ. ಮೀಟರ್ ಮತ್ತು ಅಭಿವೃದ್ಧಿ ಹೊಂದಿದ ಜಮೀನೆಂದು ಪರಿಗಣಿಸಬೇಕು) ಚ.ಮೀ. .1,30,000 ಮಾರ್ಗ ಸೂಚಿ ದರವಿದೆ.
-ಇದರಲ್ಲಿ ಮಾರ್ಗಸೂಚಿ ದರದ ಶೇ.30ರಷ್ಟುಎಂದರೆ ಚದರ ಮೀಟರ್ಗೆ .40,000 ಆಗುತ್ತದೆ. ಅದೇ ರೀತಿ ಎಕರೆಗೆ (ಎಕರೆಗೆ 4047 ಚ.ಮೀಟರ್ಗಳು) . 13.62 ಕೋಟಿ ಬದಲು .15.78 ಕೋಟಿ ಆಗುತ್ತದೆ. ಅಂದರೆ ಎಕರೆ ಲೆಕ್ಕಾಚಾರಕ್ಕೂ, ಚದರ ಮೀಟರ್ ಲೆಕ್ಕಾಚಾರಕ್ಕೂ ಶೇ.13ರಷ್ಟುಹೆಚ್ಚಾಗುತ್ತದೆ.
-ಇದೇರೀತಿ ಗೊಟ್ಟಿಗೆರೆ ಮತ್ತು ಕೆಂಗೇರಿ ಸುತ್ತಮುತ್ತ ನೋಡಿದರೆ ಶೇ.30 ವರೆಗೂ ಏರಿಕೆಯಾಗುತ್ತದೆ. ಇತರ ಮಹಾನಗರಗಳಲ್ಲೂ ಈ ರೀತಿ ದರ ಏರಿಕೆಯಾಗಲಿದೆ.
ವರದಿ: ಕನ್ನಡಪ್ರಭ