Asianet Suvarna News Asianet Suvarna News

ಅಗಲಿದ ಆತ್ಮೀಯ ಗೆಳೆಯನಿಗೆ ಹೆಗಲು ಕೊಟ್ಟ ರಮೇಶ್ ಕುಮಾರ್, ಸಿದ್ದರಾಮಯ್ಯ

  • ಭಾನುವಾರ ನಿಧನರಾಗಿದ್ದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜೈಪಾಲ್ ರೆಡ್ಡಿ
  • ಶವಯಾತ್ರೆಯಲ್ಲಿ ಭಾಗವಹಿಸಿದ ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ
Ramesh Kumar Siddaramaiah Shoulder the Jaipal Reddy Bier
Author
Bengaluru, First Published Jul 29, 2019, 3:53 PM IST

ಹೈದರಾಬಾದ್ (ಜು.29): ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಶವಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ಭಾಗವಹಿಸಿದರು.

"

ಶವಯಾತ್ರೆಯಲ್ಲಿ ಅಗಲಿದ ತಮ್ಮ ಗೆಳೆಯನಿಗೆ ಅವರಿಬ್ಬರು ಹೆಗಲು ಕೊಟ್ಟದ್ದು ವಿಶೇಷವಾಗಿತ್ತು. ರಮೇಶ್ ಕುಮಾರ್ ಮತ್ತು ಜೈಪಾಲ್ ರೆಡ್ಡಿ  ಆತ್ಮೀಯ ಸ್ನೇಹಿತರಾಗಿದ್ದವರು.

Ramesh Kumar Siddaramaiah Shoulder the Jaipal Reddy Bier

4 ಬಾರಿ ಶಾಸಕ, 5 ಬಾರಿ ಸಂಸದ ಹಾಗೂ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ಜೈಪಾಲ್ ರೆಡ್ಡಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು.

ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ನಿವಾಸದಿಂದ ಆರಂಭವಾದ ಜೈಪಾಲ್ ರೆಡ್ಡಿ ಶವಯಾತ್ರೆ ಪಿ.ವಿ. ಘಾಟ್‌ವರೆಗೆ ಸಾಗಿತು. ಅಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

Follow Us:
Download App:
  • android
  • ios