ಮೋದಿ ಸಂಪುಟದಲ್ಲಿಲ್ಲ ರಾಜ್ಯವರ್ಧನ್ ಸಿಂಗ್ ರಾಥೋಡ್‌ಗೆ ಸ್ಥಾನ| ಹೊರಗುಳಿದ ಸಂಸದನಿಗೆ ಸಿಗುತ್ತಾ ಮಹತ್ತರ ಜವಬ್ದಾರಿ| ಟ್ವಿಟರ್‌ನಲ್ಲಿ ಮೋದಿಗೆ ಧನ್ಯವಾದ ತಿಳಿಸಿದ ಸಂಸದನಿಗೆ ರಾಜಸ್ಥಾನದ ಜವಾಬ್ದಾರಿ?

ಜೈಪುರ[ಮೇ.31]: ಕಳೆದ ಅವಧಿಯಲ್ಲಿ ಸ್ಟಾರ್ ಸಚಿವರಾಗಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಬಾರಿ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರಿಗೆ ಮುಂದೆ ಯಾವ ಜವಾಬ್ದಾರಿ ನೀಡಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಪಡೆಯದ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೆಗಲಿಗೆ ಮಹತ್ತರ ಜವಾಬ್ದಾರಿ ಏರುವ ಸಾಧ್ಯತೆ ಇದೆ. ಹೌದು ಇವರನ್ನು ಬಿಜೆಪಿಯು ರಾಜಸ್ಥಾನದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳಿವೆ.

ರಾಜಸ್ಥಾನದಲ್ಲಿ ಕಳೆದ ಬಾರಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೀನಾಯ ಸೋಲನುಭವಿಸಿತ್ತು. ಇದಾದ ಬಳಿಕ ಪಕ್ಷ ರಾಜ್ಯದಲ್ಲಿ ಬಲಿಷ್ಟ ನಾಯಕರ ಹುಡುಕಾಟದಲ್ಲಿತ್ತು. ಗಜೇಂದ್ರ ಸಿಂಗ್ ಶೆಖಾವತ್, ವಸುಂಧರಾ ರಾಜೆ ಬಳಿಕ ಹೆಚ್ಚು ಜನಪ್ರಿಯವಾಗಿರದ ಮದನ್ ಲಾಲ್ ಸೈನಿಯವರನ್ನು ರಾಜಸ್ಥಾನದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೀಗ ಇಲ್ಲಿ ಬಹುದೊಡ್ಡ ಬದಲಾವಣೆಯಾಗುವ ನಿರೀಕ್ಷೆಗಳಿವೆ. ಈ ಬಹುದೊಡ್ಡ ಜವಾಬ್ದಾರಿ ರಾಜ್ಯವರ್ಧನ್ ಬೆನ್ನೇರುವ ಸಾಧ್ಯತೆಗಳಿವೆ.

Scroll to load tweet…
Scroll to load tweet…

ಪ್ರಮಾಣ ವಚನದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದರು.