ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್  ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ನವದೆಹಲಿ (ಅ.04): ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್ ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾಂಕ್ ನೇಮಕ ಸಮಿತಿ ರಜನೀಶ್ ಕುಮಾರ್’ರವರನ್ನು 3 ವರ್ಷಗಳ ಕಾಲ ಚೇರ್’ಮನ್ ಆಗಿ ನೇಮಕ ಮಾಡಿದೆ. ಅ.07 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಜನೀಶ್ ಕುಮಾರ್ ಮೇ. 06 ರಂದು ಎಸ್’ಬಿಐ ಮಂಡಳಿಯನ್ನು ಸೇರಿದ್ದಾರೆ. ಇವರು ಬೇರೆ ಬೇರೆ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.