ಕಾಶ್ಮೀರಿಗಳು ಸದಾಕಾಲ ನಮ್ಮೊಂದಿಗೆ ಇರಲಿದ್ದಾರೆ ಎಂದ ಗೃಹ ಸಚಿವ| ಕಾಶ್ಮೀರಿಗಳು ನಮ್ಮವರೇ ಎಂದ ರಾಜನಾಥ್ ಸಿಂಗ್| ‘ಕಾಶ್ಮೀರಿ ಯುವಕರ ಮೇಲೆ ಹಲ್ಲೆ ನೋವು ತಂದಿದೆ’| ಕಾಶ್ಮೀರಿ ಜನಗಳ ರಕ್ಷಣೆಗಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ|

ಬೆವಾರ್(ಮಾ.09): ಕಾಶ್ಮೀರಿಗಳು ನಮ್ಮವರಾಗಿದ್ದು, ಅವರು ನಮ್ಮೊಂದಿಗೆ ಸದಾಕಾಲ ಇರಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೀವರ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣಗಳು ನೋವು ತಂದಿವೆ ಎಂದು ಖೇದ ವ್ಯಕ್ತಪಡಿಸಿದರು. ಕಾಶ್ಮೀರಿಗಳು ನಮ್ಮವರಾಗಿದ್ದು, ಅವರು ನಮ್ಮೊಂದಿಗೆ ಇರಲಿದ್ದಾರೆ ಹಿಗಾಗಿ ಅವರನ್ನು ಗೌರವಿಸಿ ಎಂದು ರಾಜನಾಥ್ ಮನವಿ ಮಾಡಿದರು.

ಇದೇ ವೇಳೆ ಕಾಶ್ಮೀರಿ ಜನಗಳ ರಕ್ಷಣೆ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದರು. ಪುಲ್ವಾಮಾ ದಾಳಿ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿ ಯುವಕರ ಮೇಲೆ ಹಲ್ಲೆ ಪ್ರಕರಣಗಳು ಬೆಳಕಿಗೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.