ಮೃತರ ಮಕ್ಕಳಿಗೆ ಫೌಂಡೇಶನ್ ವತಿಯಿಂದ ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರು(ಫೆ.16): ರಾಜಸ್ತಾನದ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಹರಿಹರದ ಅಬ್ದುಲ್ ಜಾವೀದ್ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್'ರಿಂದ ಅವರು ಪ್ಲಾಗ್ ಆಪ್ ಆನರ್ ಪೌಂಡೇಶನ್ ವತಿಯಿಂದ 2 ಲಕ್ಷ ರೂ. ನೆರವು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜೀವ್ ಚಂದ್ರಶೇಖರ್ ಅನುಪಸ್ಥಿತಿಯಲ್ಲಿ ಫೌಂಡೇಶನ್ ಸದಸ್ಯರಾದ ಸುರೇಶ್ ಸಹ ಸದಸ್ಯರು ಚಿಕ್ ವಿತರಿಸಿದರು.ಮೃತರ ಮಕ್ಕಳಿಗೆ ಫೌಂಡೇಶನ್ ವತಿಯಿಂದ ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಸೇನೆಯಲ್ಲಿದ್ದ ಹರಿಹರದ ಯೋಧ ಅಬ್ದುಲ್ ಜಾವೀದ್ ಕಳೆದ ನಾಲ್ಕು ದಿನಗಳ ಹಿಂದೆ ರಾಜಸ್ತಾನದ ಪೋಕ್ರಾನ್ ನಲ್ಲಿ ಸಾವನ್ನಪ್ಪಿದ್ದರು. ನಿನ್ನೆ ದಾವಣಗೆರೆ ಹರಿಹರದ ಖಬಸ್ತಾನದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.