Asianet Suvarna News Asianet Suvarna News

50 ಲಕ್ಷ ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ

ಕುಟುಂಬಕ್ಕೆ ಹಣ ಸಿಗಲಿ ಎಂದು ತನ್ನ ಹತ್ಯೆಗೆ ವ್ಯಕ್ತಿಯೋರ್ವ ತಾನೇ ಸುಪಾರಿ ಕೊಟ್ಟ ವಿಚಿತ್ರ ಪ್ರಕರಣ ನಡೆದಿದೆ. 

Rajasthan man plots own murder so family can get insurance Money
Author
Bengaluru, First Published Sep 11, 2019, 9:46 AM IST

ಜೈಪುರ (ಸೆ.11): ಸಾಲವಾಗಿ ಕೊಟ್ಟವಸೂಲಾಗದೇ ಕಂಗೆಟ್ಟಲೇವಾದೇವಿದಾರನೊಬ್ಬ, ತನ್ನ ಕೊಲೆಗೆ ತಾನೇ ಸುಪಾರಿ ಕೊಟ್ಟು ದುರಂತ ಅಂತ್ಯ ಕಂಡ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಹತ್ಯೆಗೈದ ಇಬ್ಬರನ್ನು ಬಂಧಿಸಲಾಗಿದೆ.

ಬಲ್‌ಬಿರ್‌ ಎಂಬಾತ ಲೇವಾದೇವಿ ವೃತ್ತಿ ಮಾಡುತ್ತಿದ್ದ. ಬೇರೆಯವರಿಂದ 20 ಲಕ್ಷ ರು. ಹಣ ಪಡೆದು, ಅದನ್ನು ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ಸಾಲವಾಗಿ ನೀಡಿದ್ದ. ಆದರೆ ಕಳೆದ 6 ತಿಂಗಳಿನಿಂದ ಹಣ ವಸೂಲಿ ಆಗಿರಲಿಲ್ಲ. ಇದರಿಂದ ಕಂಗೆಟ್ಟ ಬಲಬೀರ್‌, ಪರಿಸ್ಥಿತಿ ಹೀಗೆಯೇ ಮುಂದುವರೆದು ತನ್ನ ಕುಟುಂಬ ಸದಸ್ಯರು ಸಂಕಷ್ಟ ಪಡಬೇಕಾಗಿ ಬರುತ್ತದೆ ಎಂಬ ಚಿಂತೆಗೆ ಗುರಿಯಾಗಿದ್ದ.

ಇದಕ್ಕೆ ಪರಿಹಾರದ ರೂಪದಲ್ಲಿ ಆತ ಕಳೆದ ತಿಂಗಳು 50 ಲಕ್ಷ ರು.ನ ಅಪಘಾತ ವಿಮೆ ಮಾಡಿಸಿದ್ದ. ಇದರ ಮೊದಲ ಕಂತಾಗಿ 8 ಲಕ್ಷ ರು. ಹಣವನ್ನೂ ನೀಡಿದ್ದ. ಬಳಿಕ ಅಪಘಾತ ಮಾಡಿಕೊಂಡು ಸಾವನ್ನಪ್ಪುವುದು. ಹೀಗಾದಲ್ಲಿ ಕುಟುಂಬ ಸದಸ್ಯರಿಗೆ 50 ಲಕ್ಷ ರು. ಹಣ ಸಿಕ್ಕು ಅವರು ನೆಮ್ಮದಿಯಾಗಿ ಬದುಕಬಲ್ಲರು ಎಂದು ಯೋಜನೆ ರೂಪಿಸಿದ್ದ. ಆದರೆ ಅಪಘಾತದಲ್ಲಿ ಬದುಕುಳಿದರೆ ಸಮಸ್ಯೆ ಇನ್ನಷ್ಟುಹೆಚ್ಚಾಗುತ್ತದೆ ಎಂದು ಹೆದರಿದ ಬಲಬೀರ್‌, ಇಬ್ಬರು ಹಂತಕರಿಗೆ ತನ್ನನ್ನು ಕೊಲ್ಲಲು 80000 ರು. ಸುಪಾರಿ ಕೊಟ್ಟಿದ್ದ. ಮುಂಗಡವಾಗಿ ಅವರಿಗೆ 10000 ರು. ನೀಡಿದ್ದ.

ಇತ್ತೀಚೆಗೊಂದು ದಿನ ನಿಗದಿಯಾದಂತೆ ಹಂತಕರು ಬಲಬೀರ್‌ನನ್ನು ಹತ್ಯೆಗೈದಿದ್ದರು. ಏಕಾಏಕಿ ನಡೆದ ಕೊಲೆ ಬೆನ್ನುಹತ್ತಿದ್ದ ಪೊಲೀಸರು ಬಲಬೀರ್‌ನ ಮೊಬೈಲ್‌ ಕರೆ ಮತ್ತು ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬಲಬೀರ್‌ ಹತ್ಯೆಗೆ ಆತನೇ ಸುಪಾರಿ ಕೊಟ್ಟಿದ್ದ ವಿಷಯವನ್ನು ಹಂತಕರು ಬಾಯಿಬಿಟ್ಟಿದ್ದಾರೆ.

Follow Us:
Download App:
  • android
  • ios