ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಸೇರುವ ಬಗ್ಗೆ 6 ದಿನಗಳ ಕಾಲ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಇಂದು ನಡೆದ ಸಂವಾದದಲ್ಲಿ ವರನಟ ಡಾ.ರಾಜ್​​'ಕುಮಾರ್​​'ರನ್ನು ರಜನಿಕಾಂತ್  ಹಾಡಿ ಹೊಗಳಿದ್ದಾರೆ.  ಡಾ.ರಾಜ್​ ನನ್ನ ಪಾಲಿನ ಆದರ್ಶ. ರಾಜ್​'ಕುಮಾರ್​ ಓರ್ವ ಅದ್ಭುತ ನಟ ಎಂದು ತಲೈವಾ ಶ್ಲಾಘಿಸಿದ್ದಾರೆ. ​

ಚೆನ್ನೈ (ಡಿ.28): ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಸೇರುವ ಬಗ್ಗೆ 6 ದಿನಗಳ ಕಾಲ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಇಂದು ನಡೆದ ಸಂವಾದದಲ್ಲಿ ವರನಟ ಡಾ.ರಾಜ್​​'ಕುಮಾರ್​​'ರನ್ನು ರಜನಿಕಾಂತ್ ಹಾಡಿ ಹೊಗಳಿದ್ದಾರೆ. ಡಾ.ರಾಜ್​ ನನ್ನ ಪಾಲಿನ ಆದರ್ಶ. ರಾಜ್​'ಕುಮಾರ್​ ಓರ್ವ ಅದ್ಭುತ ನಟ ಎಂದು ತಲೈವಾ ಶ್ಲಾಘಿಸಿದ್ದಾರೆ. ​

ಶಿವಾಜಿ ಗಣೇಶನ್​, ಎಂಜಿಆರ್'​ರಂತೆ ರಾಜ್​​ಕುಮಾರ್​ ಕೂಡಾ ಮಹಾನ್​ ನಟ. ಅಣ್ಣಾವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ನನ್ನ ಪುಣ್ಯ. ಕಾದು ಕಾದು ನಂತರ ಅವರು ಸಿಕ್ಕಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಾನು ಬೆಂಗಳೂರಿನಲ್ಲಿ ಇದ್ದಾಗ ರಾಜ್​ಕುಮಾರ್​ ಸಿನಿಮಾ ಇಷ್ಟಪಡುತ್ತಿದ್ದೆ ಎಂದು ಅಣ್ಣಾವ್ರನ್ನ ರಜನೀಕಾಂತ್ ಹಾಡಿ ಹೊಗಳಿದ್ದಾರೆ.