‘ಕಟ್ಟಪ್ಪ' ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ-2 ಸಿನಿಮಾನವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪುನರುಚ್ಚರಿಸುತ್ತಿರುವ ಹಿನ್ನೆಲೆಯಲ್ಲಿ  ಕೊನೆಗೂ ಕನ್ನಡಿಗರಿಗೆ  ನಿರ್ದೇಶಕ ರಾಜಮೌಳಿ  ಮೊರೆ ಹೋಗಿದ್ದಾರೆ. ಇದೀಗ ಕನ್ನಡಿಗರ ಕೋಪ ತಣಿಸಲು ರಾಜಮೌಳಿ ಕನ್ನಡದಲ್ಲೇ ಮಾತನಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಬೆಂಗಳೂರು(ಎ.20): ‘ಕಟ್ಟಪ್ಪ' ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ-2 ಸಿನಿಮಾನವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪುನರುಚ್ಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಕನ್ನಡಿಗರಿಗೆ ನಿರ್ದೇಶಕ ರಾಜಮೌಳಿ ಮೊರೆ ಹೋಗಿದ್ದಾರೆ. ಇದೀಗ ಕನ್ನಡಿಗರ ಕೋಪ ತಣಿಸಲು ರಾಜಮೌಳಿ ಕನ್ನಡದಲ್ಲೇ ಮಾತನಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಕನ್ನಡಿಗರ ಬಳಿ ಕನ್ನಡದಲ್ಲೇ ಮನವಿ ಮಾಡಿಕೊಂಡಿರುವ ನಿರ್ದೇಶಕ ರಾಜಮೌಳಿ

'ಕೆಲ ವರ್ಷಗಳ ಹಿಂದೆ ಸತ್ಯರಾಜ್​ ಕನ್ನಡಿಗರ ಬಗ್ಗೆ ಕಮೆಂಟ್​ ಮಾಡಿದ್ದರು. ಸತ್ಯರಾಜ್ ಹೇಳಿಕೆ ಕನ್ನಡಿಗರಿಗೆ ನೋವು ತಂದಿದೆ. ಆದರೆ, ಸತ್ಯರಾಜ್​ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ಹೇಳಿಕೆಗಳು ಸತ್ಯರಾಜ್ ಅವರ ವ್ಯಕ್ತಿಗತ ಅಭಿಪ್ರಾಯ. ಫೇಸ್​ಬುಕ್​​ನಲ್ಲಿ ಈ ವಿಡಿಯೋ ನೋಡುವವರೆಗೂ ನಮಗೆ ವಿಷಯ ಗೊತ್ತಿರಲಿಲ್ಲ. ಸತ್ಯರಾಜ್​ ಕಮೆಂಟ್​ ಮಾಡಿ 9 ವರ್ಷಗಳೇ ಸಂದಿವೆ. ಆ ಬಳಿಕ ಕರ್ನಾಟಕದಲ್ಲಿ ಸತ್ಯರಾಜ್​ರ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಬಾಹುಬಲಿ-1 ಚಿತ್ರವನ್ನು ನೀವೆಲ್ಲ ನೋಡಿ ಆದರಿಸಿದ್ದಿರಿ. ಅದೇ ರೀತಿ ಬಾಹುಬಲಿ-2 ಚಿತ್ರ ಬಿಡುಗಡೆಗೂ ಸಹಕರಿಸಬೇಕು. ಸತ್ಯರಾಜ್​, ಬಾಹುಬಲಿ ಚಿತ್ರದ ನಿರ್ದೇಶಕರೂ ಅಲ್ಲ ನಿರ್ಮಾಕರೂ ಅಲ್ಲ, ಈ ಚಿತ್ರದಲ್ಲಿ ನಟಿಸಿರುವ ಎಲ್ಲರಂತೆ ಅವರೂ ಒಬ್ಬ ನಟ ಅಷ್ಟೇ. ಈ ಚಿತ್ರ ಸ್ಥಗಿತಗೊಂಡರೆ ಸತ್ಯರಾಜ್​ ಅವರಿಗೂ ಯಾವುದೇ ನಷ್ಟವಾಗಲ್ಲ. ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಮೇಲೆ ತೋರಿಸುವುದು ಸರಿಯಲ್ಲ. ಕನ್ನಡಿಗರ ಕೋಪವನ್ನು ಸತ್ಯರಾಜ್​ ಗಮನಕ್ಕೂ ತಂದಿದ್ದೇವೆ. ಫೋನ್ ಮೂಲಕ ಪರಿಸ್ಥಿತಿಯನ್ನು ಸತ್ಯರಾಜ್​ಗೆ ವಿವರಿಸಿದ್ದೇವೆ. ಇಷ್ಟರ ಮೇಲೆ ಬೇರೇನು ಮಾಡುವ ಶಕ್ತಿ ನಮಗೆ ಇಲ್ಲ. ನಮಗೆ ಸಂಬಂಧ ಇಲ್ಲದೇ ಇರುವ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ ಎಂಬ ಮನಃಪೂರ್ವಕ ಕೋರಿಕೆ. ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಬೇಕೆಂಬ ಆಸೆ. ಹೃದಯಪೂರ್ವಕ ಧನ್ಯವಾದಗಳು' ಎಂದು ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಿದೆ.