ಬೆಂಗಳೂರಿನಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಮಳೆಯು ಹಲವಾರು ಕಡೆ ಅನಾಹುತಗಳಿಗೆ ಕಾರಣವಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಮಳೆಯು ಹಲವಾರು ಕಡೆ ಅನಾಹುತಗಳಿಗೆ ಕಾರಣವಾಗಿದೆ.
ಚಂದ್ರಾಲೇಔಟ್ನಲ್ಲಿ ಹಾಸ್ಟೆಲ್ ಗೋಡೆ ಕುಸಿದು 6 ಕಾರು, 2 ಆಟೋ, 8 ಬೈಕ್ಗಳು ಜಖಂಗೊಂಡಿದೆ. ಸ್ಥಳಕ್ಕೆ ಕಾರ್ಪೊರೇಟರ್ ರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಜೆಪಿ ನಗರದ ಐದನೇ ಬ್ಲಾಕ್ನಲ್ಲಿ ಮನೆ ಮೇಲೆಯೇ ಅಪಾರ್ಟ್ಮೆಂಟ್ ಗೋಡೆಯೊಂದು ಕುಸಿದ ಘಟನೆ ನಡೆದಿದೆ. ಶೋಭಾ ಡಿಪ್ಲೋರ್ ಅಪಾರ್ಟ್ಮೆಂಟ್ ಗೋಡೆಯು ಮನೆ ಬಾಗಿಲ ಮೇಲೆ ಕುಸಿದಿದ್ದು, ಕುಟುಂಬದ ನಾಲ್ಕು ಸದಸ್ಯರು ಮನೆಯೊಳಗೇ ಬಂಧಿಯಾಗಿದ್ದಾರೆ.
ಜೆಪಿ ನಗರದ 2ನೇ ಬ್ಲಾಕ್, ಕೋರಮಂಗಲ, ನಾಯಂಡಹಳ್ಳಿಗಳಲ್ಲಿ ಕೂಡಾ ಮನೆಗಳಿಗೆ ನೀರು ನುಗ್ಗಿದೆ. (ಸಾಂದರ್ಭಿಕ ಚಿತ್ರ)
