ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ತೆರಬೇಕೆಂದುಕೊಂಡಿರುವವರಿಗೆ ರೈಲ್ವೆ ಇಲಾಖೆ ಶುಔ ಸುದ್ದಿಯೊಂದನ್ನು ನೀಡಿದೆ.  ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನವೆಂಬರ್ 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. 

ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನ. 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. ಈ ರೈಲು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಗೂ ಆಗಮಿಸುತ್ತದೆ. ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಮೂಲಕ 15 ದಿನಗಳ ಪ್ಯಾಕೇಜ್ ಪ್ರವಾಸವನ್ನು ರೈಲ್ವೆ ಇಲಾಖೆ ರೂಪಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಊಟ, ವಸತಿ, ಸಾರಿಗೆ ವೆಚ್ಚ ಎಲ್ಲವನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ. ತಮಿಳುನಾಡಿನ ಮದುರೈ, ದಿಂಡಿಗಲ್, ಕರೂರು, ಈರೋಡ್, ಸೇಲಂ, ಜೋಲಾರ್‌ಪೇಟೆ, ಕಾಟ್ಪಾಡಿ, ಚೆನ್ನೈ ಸೆಂಟ್ರಲ್, ರೇಣಿಗುಂಟ ದಲ್ಲಿ ಪ್ರವಾಸಿಗರು ಈ ರೈಲನ್ನು ಏರ ಬಹುದು. ಈ ರೈಲು ನಿಲುಗಡೆ ಆಗುವ ಮೊದಲ ಪ್ರವಾಸಿ ತಾಣ ಹಂಪಿ. ಅಲ್ಲಿಂದ ಕಿಷ್ಕಿಂಧೆಗೆ ಯಾತ್ರಿಗಳನ್ನು ಕರೆದೊಯ್ಯಲಾಗುತ್ತದೆ. 

ನಂತರ ಮಹಾರಾಷ್ಟ್ರ, ಬಿಹಾರ, ನೇಪಾಳ, ಅಲಹಾ ಬಾದ್, ರಾಮೇಶ್ವರ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಲಿದೆ.800 ಮಂದಿ ಈ ರೈಲಿನಲ್ಲಿ ತೆರಳಬಹುದಾಗಿದೆ. ಮದುರೈ ನಿಂದ ಆರಂಭವಾಗುವ ಈ ರೈಲು ಯಾತ್ರೆ ರಾಮೇಶ್ವರಂನಲ್ಲಿ ಅಂತ್ಯಗೊಳ್ಳಲಿದೆ.