Asianet Suvarna News Asianet Suvarna News

ಬಿಜೆಪಿಯ 'ಸತ್ಯವಾದಿ' ನಾಯಕ ಯಾರೆಂದು ಹೇಳಿದ ರಾಹುಲ್ ಗಾಂಧಿ!

ಬಿಜೆಪಿಯ ಪ್ರಾಮಾಣಿಕ ನಾಯಕ ಯಾರೆಂದು ಹೇಳಿದ ರಾಹುಲ್ ಗಾಂಧಿ| ರಾಹುಲ್ ಗಾಂಧಿ ಪ್ರಕಾರ ಬಿಜೆಪಿಯ ಪ್ರಾಮಾಣಿಕ ನಾಯಕ ಬಕ್ಷೀಶ್ ಸಿಂಗ್ ವರ್ಕ್| ಇವಿಎಂ ಯಂತ್ರಗಳಲ್ಲಿ ಬದಲಾವಣೆ ಮಾಡಿದ್ದಾಗಿ ಹೇಳಿದ್ದ ಬಕ್ಷೀಶ್ ಸಿಂಗ್| ಮತದಾರ ಯಾರಿಗೇ ಮತ ಹಾಕಿದರೂ ಬಿಜೆಪಿಗೆ ಮತ ಬೀಳಲಿದೆ ಎಂದಿದ್ದ ವರ್ಕ್| ಪ್ರಧಾನಿ ಮೋದಿ ಹಾಗೂ ಸಿಎಂ ಖಟ್ಟರ್ ಅತ್ಯಂತ ಚಾಣಾಕ್ಷರು ಎಂದಿದ್ದ ಬಿಜೆಪಿ ಶಾಸಕ| ಸತ್ಯ ನುಡಿದ ಬಕ್ಷೀಶ್ ಸಿಂಗ್ ಅಭಿನಂದನಾರ್ಹರು ಎಂದು ವ್ಯಂಗ್ಯವಾಡಿದ ರಾಹುಲ್| ವರ್ಕ್ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೋರಿ ನೊಟೀಸ್ ನೀಡಿರುವ ಚುನಾವಣಾ ಆಯೋಗ|

Rahul Gandhi Points Out The Most  Honest Leader In The BJP
Author
Bengaluru, First Published Oct 21, 2019, 6:01 PM IST

ನವದೆಹಲಿ(ಅ.21): ಸದಾ ಬಿಜೆಪಿ ಮತ್ತು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಬಾರಿ ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಯಾರು ಎಂಬುದನ್ನು ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರಕಾರ ಬಿಜೆಪಿ ಅತ್ಯಂತ ನಿಷ್ಠಾವಂತ ಮತ್ತು ಪ್ರಾಮಾಣಿಕ ನಾಯಕ ಎಂದರೆ ಶಾಸಕ ಬಕ್ಷೀಶ್ ಸಿಂಗ್ ವರ್ಕ್ ಅಂತೆ. ಇದಕ್ಕೆ ಕಾರಣವನ್ನೂ ರಾಹುಲ್ ಗಾಂಧಿ ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ಮತದಾನ: ಮತಗಟ್ಟೆಯ ಸರತಿ ಸಾಲಿನಲ್ಲಿ ಪ್ರತಿಷ್ಠಿತರು!

ಮತದಾರ ಯಾರಿಗೇ ಮತದಾನ ಮಾಡಿದರೂ ಅವರ ಮತ ಬಿಜೆಪಿಗೆ ಬೀಳಲಿದೆ ಎಂದು ಚುನಾವಣಾ ಪ್ರಚಾರ ವೇಳೆ ಬಕ್ಷೀಶ್ ಸಿಂಗ್ ವರ್ಕ್ ಹೇಳಿದ್ದರು. ಇವಿಎಂ ಯಂತ್ರಗಳನ್ನು ಬಿಜೆಪಿಗೆ ಮತ ಬೀಳುವಂತೆ ಮಾರ್ಪಡಿಸಲಾಗಿದೆ ಎಂದು ವರ್ಕ್ ನುಡಿದಿದ್ದರು.

ಪ್ರಧಾನಿ ಮೋದಿ ಹಾಗೂ ಸಿಎಂ ಮನೋಹರ್‌ಲಾಲ್ ಖಟ್ಟರ್ ಬಹಳ ಚಾಣಾಕ್ಷರಾಗಿದ್ದು, ಎಲ್ಲ ಮತಗಳೂ ಬಿಜೆಪಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ನೀವು ಯಾರಿಗೆ ಮತ ಹಾಕುತ್ತೀರಿ ಎಂಬುದು ಕೂಡ ಮೋದಿ ಅವರಗೆ ಗೊತ್ತಾಗಲಿದೆ ಎಂದು ವರ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವರ್ಕ್ ಅವರ ಈ ಹೇಳಿಕೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಹೇಗೆ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಬಕ್ಷೀಶ್ ಸಿಂಗ್ ವರ್ಕ್ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದೊಳ್ಳೆ ತಲೆನೋವು! ವಿದೇಶಕ್ಕೆ ಹೋದ್ರೂ ರಾಹುಲ್ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ!

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಜನರಿಗೆ ಸತ್ಯ ತಿಳಿಸಿರುವ ವರ್ಕ್ ನಿಜಕ್ಕೂ ಅಭಿನಂದನಾರ್ಹರು ಎಂದು ಕುಹುಕವಾಡಿದ್ದಾರೆ. ಇನ್ನು ತಮ್ಮ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ಬಕ್ಷೀಶ್ ಸಿಂಗ್ ವರ್ಕ್ ಅವರಿಗೆ ಈಗಾಗಲೇ ನೊಟೀಸ್ ಜಾರಿ ಮಾಡಿದೆ.

Follow Us:
Download App:
  • android
  • ios