Asianet Suvarna News Asianet Suvarna News

ರಾಹುಲ್ ಒಬ್ರೆನಾ?: ಪ್ರಧಾನಿ ಹುದ್ದೆಗೆ ತೇಜಸ್ವಿ ಅಪಸ್ವರ!

ರಚನೆಯಾಗದ ಮಹಾಘಟಬಂಧನ್ ನಲ್ಲಿ ಬಿರುಕು?

ಪ್ರಧಾನಿ ಹುದ್ದೆ ರೇಸ್‌ನಲ್ಲಿ ರಾಹುಲ್ ಮಾತ್ರ ಇಲ್ಲ

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ

ಇತರ ನಾಯಕರನ್ನೂ ಪರಿಗಣಿಸಲು ತೇಜಸ್ವಿ ಸಲಹೆ

ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವುದೇ ಸವಾಲು

Rahul Gandhi Not Alone In Race For PM, There Are Others: Tejashwi Yadav

ಪಾಟ್ನಾ(ಜು.24): ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಮಾತ್ರವಲ್ಲದೆ ಇತರೆ ನಾಯಕರೂ ಇದ್ದಾರೆ ಎಂದು ಬಿಹಾರದ ಮಾಜಿ ಡಿಸಿಎಂ, ಆರ್ ​ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಪ್ರತಿಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿವೆ. ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿ ರಾಹುಲ್​ ಗಾಂಧಿ ಮಾತ್ರವಲ್ಲದೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಬಿಎಸ್​ ಸಿಪಿ ನಾಯಕಿ ಮಾಯಾವತಿ ಅವರೂ ಇದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಇದೇ ವೇಳೆ, ಮೈತ್ರಿ ಕೂಟದಿಂದ ಯಾರೇ ಪ್ರಧಾನಮಂತ್ರಿ ಅಭ್ಯರ್ಥಿಯಾದರೂ ಅವರಿಗೆ ಆರ್‌ಜೆರ್ ಪಕ್ಷದ ಸಂಪೂರ್ಣ ಬೆಂಬಲ ಇರಲಿದೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ.

ಸಂವಿಧಾನವನ್ನು ರಕ್ಷಣೆ ಮಾಡುವ ನಾಯಕನನ್ನು ಬೆಂಬಲಿಸುವುದು ನಮ್ಮ ಉದ್ದೇಶವಾಗಿದೆ. ಆದರೆ, ರಾಹುಲ್​ ಗಾಂಧಿ ಬಿಜೆಪಿಯೇತರ ಪಕ್ಷಗಳನ್ನು ಸಂಘಟಿಸಿ, ಮಹಾಮೈತ್ರಿ ಕೂಟದ ವೇದಿಕೆಗೆ ಕರೆತರಬೇಕಿದೆ ಎಂದು ತೇಜಸ್ವಿ ಹೇಳಿದ್ದಾರೆ.

Follow Us:
Download App:
  • android
  • ios