Asianet Suvarna News Asianet Suvarna News

ರಾಜ್ಯದ ಬುದ್ಧಿಜೀವಿಗಳ ಜತೆ ರಾಹುಲ್ ಗುಪ್ತ್-ಗುಪ್ತ್ ಮೀಟಿಂಗ್

ಹುಬ್ಬಳ್ಳಿಯಲ್ಲಿ ಬುದ್ದಿ ಜೀವಿಗಳ ಜೊತೆ ರಾಹುಲ್ ಸಂವಾದ| ದಿಢೀರ್ ಕಾರ್ಯಕ್ರಮ ನಿಗದಿ ಮಾಡಿದ ಬುದ್ಧಿಜೀವಿಗಳು| ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಸಂವಾದ ಕಾರ್ಯಕ್ರಮ

Rahul Gandhi Meets thinkers In Hubballi For Loksabha Elections 2019
Author
Bengaluru, First Published Mar 9, 2019, 6:51 PM IST

ಹುಬ್ಬಳ್ಳಿ, [ಮಾ.9]: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

 ಕರ್ನಾಟಕ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿಯವರು ಇಂದು [ಶನಿವಾರ] ಹಾವೇರಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದು ಆ ನಂತರ ಹುಬ್ಬಳ್ಳಿಯಲ್ಲಿ ಬುದ್ಧಿಜೀವಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಮಾವೇಶ ಮತ್ತು ಶಕ್ತಿ ಕಾರ್ಯಕರ್ತರೊಂದಿಗೆ ಮಾತ್ರ ನಿಗದಿಯಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಎಐಸಿಸಿಯ ರಾಹುಲ್ ಗಾಂಧಿಯವರ ತಂಡ ಯಾರಿಗೂ ಮಾಹಿತಿ ನೀಡದೆ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಪ್ರಗತಿಪರರೊಂದಿಗೆ ಸಮಾಲೋಚನೆ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್, ಸಮಾಜದ ಎಲ್ಲ ವರ್ಗಗಳನ್ನು ಬಳಸಿಕೊಳ್ಳುತ್ತಿದೆ. ಬಲಪಂಥಿಯ ಬಿಜೆಪಿಗೆ ಪ್ರಗತಿಪರರು, ಬುದ್ಧಿಜೀವಿಗಳೆಂದರೆ ಅಷ್ಟಕಷ್ಟೇ ಇದನ್ನೆ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ದೇಶಾದ್ಯಂತ ಪ್ರಗತಿಪರರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ.

ಬುದ್ಧಿಜೀವಿಗಳೊಂದಿಗಿನ ಸಮಾಲೋಚನೆ ವೇಳೆ ಕಾಂಗ್ರೆಸ್‍ನ ನೀತಿ-ಸಿದ್ದಾಂತಗಳು ಹೇಗಿರಬೇಕು. ಚುನಾವಣಾ ಚರ್ಚಾ ವಿಷಯ ಯಾವುದು ಇರುಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವ ಅಂಶಗಳಿಗೆ ಒತ್ತು ನೀಡಬೇಕು ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios