Asianet Suvarna News Asianet Suvarna News

10 ಸೀಟಿಗೆ ಪಟ್ಟು ಹಿಡಿದ ದೇವೇಗೌಡ್ರು; ಏನಾಯ್ತು ರಾಹುಲ್-ದೇವೇಗೌಡ್ರ ಸಭೆ?

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಸಭೆ ಮುಕ್ತಾಯ | ಸೀಟು ಹಂಚಿಕೆ ಬಗ್ಗೆ ದೇವೇಗೌಡ-ರಾಹುಲ್ ಗಾಂಧಿ ಮಹತ್ವದ ಸಭೆ |  

Rahul Gandhi and JDS dupremo  Deve Gowda discusses Loksabha Election Seat Sharing
Author
Bengaluru, First Published Mar 6, 2019, 1:19 PM IST

ನವದೆಹಲಿ (ಮಾ. 06): ಲೋಕಸಭಾ ಚುನಾವಣಾ ಸೀಟು ಹಂಚಿಕೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ಒಂದು ಸುತ್ತಿನ ಮಾತುಕತೆ  ಮುಕ್ತಾಯಗೊಂಡಿದೆ. 

'ಪೊಲಿಟಿಕಲ್' ಬೈಟ್: ಮಗಳ ಭವಿಷ್ಯಕ್ಕಿಂತ ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡ್ತೇನೆ

ಸುಮಾರು ಒಂದು‌ ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದಾರೆ.  ‘ನಾವು 10 ಸ್ಥಾನ ಕೇಳಿದ್ದೇವೆ. ಮುಂದಿನ ಮಾತುಕತೆಯನ್ನು ನಮ್ಮ‌ ಪಕ್ಷದ‌ ಪ್ರಧಾನ ಕಾರ್ಯದರ್ಶಿ ಡ್ಯಾನೀಶ್ ಆಲಿ ಮತ್ತು ಕಾಂಗ್ರೆಸ್ ನ ರಾಜ್ಯ‌ ಉಸ್ತುವಾರಿ ಪ್ರಧಾನ‌ ಕಾರ್ಯದರ್ಶಿ ಕೆ‌ ಸಿ ವೇಣು ಗೋಪಾಲ್ ನಡೆಸಲಿದ್ದಾರೆ ‘ ಎಂದು ದೇವೇಗೌಡರು ಹೇಳಿದ್ದಾರೆ. 

 

 

ಮಂಡ್ಯ ಲೋಕಸಭಾ ಕಣ: ಸುಮಲತಾ ಬೆಂಬಲಕ್ಕೆ ಕೈ ನಾಯಕರು?

ಮಂಡ್ಯದಲ್ಲಿ ಸದ್ಯ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಸುಮಲತಾ-ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕಗ್ಗಂಟಾಗಿ ಉಳಿದಿದೆ. ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಲಾಗುವುದಿಲ್ಲ ಎಂಬ ಕಾಂಗ್ರೆಸ್ ನಾಯಕರ ಬಿಗಿ ಪಟ್ಟಿನಿಂದಾಗಿ ಸೀಟು ಹಂಚಿಕೆ ಕಗ್ಗಂಟಾಗಿ ಉಳಿದಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ- ದೇವೇಗೌಡರ ಭೇಟಿ ಮಹತ್ವ ಪಡೆದಿದೆ. 
 

Follow Us:
Download App:
  • android
  • ios