Asianet Suvarna News Asianet Suvarna News

ಶಬರಿಮಲೆ ವಿವಾದ: ಮಾಜಿ ಅರ್ಚಕನ ಮೊಮ್ಮಗನ ಬಂಧನ!

ಪರ-ವಿರೋಧಿಗಳ ಯುದ್ಧದ ಮೈದಾನವಾದ ಶಬರಿಮಲೆ! ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತಡೆಯುತ್ತಿರುವ ಪ್ರತಿಭಟನಾಕಾರರು! ಪ್ರಚೋದನೆ ಆರೋಪದ ಮೇಲೆ ಮಾಜಿ ಅರ್ಚಕನ ಮೊಮ್ಮಗನ ಬಂಧನ! ರಾಹುಲ್ ಈಶ್ವರ್ ಅವರನ್ನು ಬಂಧಿಸಿದ ಕೇರಳ ಪೊಲೀಸರು
 

Rahul Easwar detained for provoking devotees in Sabarimala
Author
Bengaluru, First Published Oct 17, 2018, 5:26 PM IST

ತಿರುವನಂತಪುರಂ(ಅ.17): ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಭಕ್ತರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಯ್ಯಪ್ಪಸ್ವಾಮಿ ದೇಗುಲದ ಮಾಜಿ ಮುಖ್ಯ ಅರ್ಚಕರ ಮೊಮ್ಮಗ ರಾಹುಲ್ ಈಶ್ವರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ಈಶ್ವರ್ ಅಯ್ಯಪ್ಪನ ದರ್ಶನಕ್ಕೆ ಬರುತ್ತಿರುವ ಹೆಣ್ಣುಮಕ್ಕಳ ಮೇಲೆ ದಾಳಿ ನಡೆಸುವಂತೆ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ತಾವೇ ಖುದ್ದಾಗಿ ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ವಿರೋಧಿಸಿ ಸಾವಿರಾರು ಭಕ್ತರು ಪಂಪ ನದಿ ತೀರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೆ ಪೊಲೀಸರು 30 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಐದು ದಿನಗಳ ತುಲ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನಿಳಕ್ಕಲ್ ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.
 

Follow Us:
Download App:
  • android
  • ios