2 ಗಂಟೆ ಅವಧಿಯಲ್ಲಿ 6 ಜನರನ್ನು ಹತ್ಯೆಗೈದ ನಿವೃತ್ತ ಯೋಧ
ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎನ್ನಲಾದ ನಿವೃತ್ತ ಯೋಧ ನರೇಶ್ ಎಂಬಾತ ಮಂಗಳವಾರ ಕೇವಲ 2 ಗಂಟೆ ಅವಧಿಯಲ್ಲಿ ಕಬ್ಬಿಣದ ರಾಡ್ನಿಂದ 6 ಜನರನ್ನು ಹತ್ಯೆಗೈದ ಭೀಕರ ಘಟನೆ ಹರ್ಯಾಣ ಪಲ್ವಾಲ್ನಲ್ಲಿ ನಡೆದಿದೆ.
ಚಂಡೀಗಢ: ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎನ್ನಲಾದ ನಿವೃತ್ತ ಯೋಧ ನರೇಶ್ ಎಂಬಾತ ಮಂಗಳವಾರ ಕೇವಲ 2 ಗಂಟೆ ಅವಧಿಯಲ್ಲಿ ಕಬ್ಬಿಣದ ರಾಡ್ನಿಂದ 6 ಜನರನ್ನು ಹತ್ಯೆಗೈದ ಭೀಕರ ಘಟನೆ ಹರ್ಯಾಣ ಪಲ್ವಾಲ್ನಲ್ಲಿ ನಡೆದಿದೆ.
ಏನಾಯ್ತು?: ಮಂಗಳವಾರ ಮಧ್ಯರಾತ್ರಿ ಖಾಸಗಿ ಆಸ್ಪತ್ರೆಯ ಸಹಾಯಕ ಸಿಬ್ಬಂದಿಯೊಬ್ಬನನ್ನು ಹತ್ಯೆಗೈದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುವ ವೇಳೆ ಅದೇ ಆಸ್ಪತ್ರೆಯಲ್ಲಿ ಮಹಿಳಾ ಸಹಾಯಕಿ ಕೂಡಾ ಹತ್ಯೆಯಾಗಿದ್ದು ಕಂಡುಬಂತು. ಹೀಗಾಗಿ ಪೊಲೀಸರು ಆಸ್ಪತ್ರೆ ಸಿಸಿಟೀವಿ ದೃಶ್ಯಾವಳಿ ಪರಿಶೀಲಿಸಿ ದ ವೇಳೆ ವ್ಯಕ್ತಿಯೊಬ್ಬ ರಾಡ್ ಹಿಡಿದುಕೊಂಡು ತಿರುಗಾಡುತ್ತಿದ್ದ ದೃಶ್ಯ ಕಂಡುಬಂದಿತ್ತು.
ಆದರೆ ಆಸ್ಪತ್ರೆಯಲ್ಲಿ ಹುಡುಕಾಡಿದ ವೇಳೆ ಆತ ಪತ್ತೆಯಾಗಿರಲಿಲ್ಲ. ಆದರೆ ಈ ನಡುವೆ ಆಸ್ಪತ್ರೆಯಿಂದ ಪರಾರಿಯಾದ ನರೇಶ್, ರಸ್ತೆಯಲ್ಲಿ ಸಾಗುವ ವೇಳೆ ಎದುರಿಗೆ ಸಿಕ್ಕ ಅಂಜು, ಮುನ್ಷಿ ರಾಮ್, ಸೀತಾ ರಾಮ್, ಖೇಮ್ ಚಂದ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಕೂಡಾ ಹತ್ಯೆ ಮಾಡಿದ್ದ. ಕೊನೆಗೆ 6 ಗಂಟೆ ವೇಳೆಗೆ ಅರೆಸ್ಟ್ ಆಗಿದ್ದಾನೆ.