ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು  ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು  ಯಶವಂತಪುರದಿಂದ ಬೃಹತ್​​  ಬೈಕ್​​ ರ್ಯಾಲಿ ನಡೆಸಿದರು.

ಬೆಂಗಳೂರು (ಜ.29): ಕಂಬಳ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಹೋರಾಟ ಈಗ ಅಧಿಕೃತವಾಗಿ ಫ್ರೀಡಂ ಪಾರ್ಕ್​​ ತಲುಪಿದೆ. ​​​​​​

ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು ಯಶವಂತಪುರದಿಂದ ಬೃಹತ್​​ ಬೈಕ್​​ ರ್ಯಾಲಿ ನಡೆಸಿದರು.

300ಕ್ಕೂ ಹೆಚ್ಚು ಬೈಕ್​​​’ಗಳ ಮೂಲಕ ಹೊರಟ ರ್ಯಾಲಿಯಲ್ಲಿ, 600ಕ್ಕೂ ಹೆಚ್ಚು ಜನ ಭಾಗವಹಿಸಿ ಕಂಬಳ ಕಾಪಾಡಿ ಎಂದು ಘೋಷಣೆ ಕೂಗಿದರು.

ಮಲ್ಲೇಶ್ವರಂ, ಆನಂದರಾವ್​ ಸರ್ಕಲ್​​​ ಮೂಲಕ ಸಾಗಿದ ಈ ಬೈಕ್​​​ ರ್ಯಾಲಿ, ಫ್ರೀಡಂ ಪಾರ್ಕ್​​​ ತಲುಪಿತು. ಇನ್ನು ಕರಾವಳಿ ಮಿತ್ರ ಮಂಡಳಿ ಅಧ್ಯಕ್ಷರಾದ ಸೌಂದರ್ಯ ರಮೇಶ್​ ಮಾತನಾಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರ ಅನಿಮತಿ ನೀಡಿದೆ. ಆದ್ದರಿಂದ ಕರ್ನಾಟಕದಲ್ಲೂ ಕಂಬಳ ಆಚರಣೆಗೆ ಹೈಕೋರ್ಟ್​​​ ಅನುಮತಿ ನೀಡಬೇಕು ಎಂದರು.

ಒಂದು ವೇಳೆ ಕೋರ್ಟ್​​​ ನಾಳೆ ಅನುಮತಿ ನೀಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.