ಪದೇ ಪದೇ ರಾಜ್ಯವನ್ನು ನೀರು ಬಿಡುವಂತೆ ಆದೇಶ‌ ನೀಡುತ್ತಿರುವ ಸುಪ್ರೀಂಕೋರ್ಟ್’ನ ನ್ಯಾಯಮೂರ್ತಿಗಳ ಪ್ರತಿಕೃತಿಯನ್ನೂ ದಹಿಸಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ  ತಮಿಳುನಾಡಿಗೆ ನೀರು ಹರಿಸದಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಮಂಡ್ಯ (ಜ.05): ತಮಿಳುನಾಡಿಗೆ ಕೆಆರ್’ಎಸ್ ನಿಂದ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಮದ್ದೂರಿನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Add Asianetnews Kannada as a Preferred SourcegooglePreferred

ಜಿಲ್ಲಾಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ತಡೆದು ಸುಪ್ರೀಂಕೋರ್ಟ್’ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಪದೇ ಪದೇ ರಾಜ್ಯವನ್ನು ನೀರು ಬಿಡುವಂತೆ ಆದೇಶ‌ ನೀಡುತ್ತಿರುವ ಸುಪ್ರೀಂಕೋರ್ಟ್’ನ ನ್ಯಾಯಮೂರ್ತಿಗಳ ಪ್ರತಿಕೃತಿಯನ್ನೂ ದಹಿಸಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸದಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಿಂದಾಗಿ‌ ಕೆಲ ಮೈಸೂರು ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.