ಬೆಳಗ್ಗಿನಿಂದ ರಾಮಚಂದ್ರಾಪುರ ಮಠದಲ್ಲಿ ಕನ್ಯಾ ಸಂಸ್ಕಾರ ನಡೀತಿದ್ದು, ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ಯಾ ಸಂಸ್ಕಾರ ಕಾರ್ಯಕ್ರಮ ವಿರೋಧಿಸಿ ದಲಿತ ಸಂಘಟನೆಗಳು, ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಮುತ್ತಿಗೆ ಯತ್ನ ನಡೆಸಿದರು.

Add Asianetnews Kannada as a Preferred SourcegooglePreferred

ರಾಘವೇಶ್ವರ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳು, ವಂದೇ ಗೋಮಾತರಂ ಘೋಷಣೆ ಕೂಗಿದರು. ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪವಿದೆ. ಇಂತವರು ಹೆಣ್ಣು ಮಕ್ಕಳಿಗೆ ಕನ್ಯಾಸಂಸ್ಕಾರ ಮಾಡುವುದು ಎಷ್ಟು ಸರಿ ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗಿನಿಂದ ರಾಮಚಂದ್ರಾಪುರ ಮಠದಲ್ಲಿ ಕನ್ಯಾ ಸಂಸ್ಕಾರ ನಡೀತಿದ್ದು, ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಆನೇಕಲ್ ಸೇರಿದಂತೆ ಬೇರೆ ಭಾಗಗಳಿಂದ ಬಂದ ಪ್ರತಿಭಟನಾಕಾರರು ರಾಘವೇಶ್ವರ ಶ್ರೀಗಳ ವಿರುದ್ಧ ಘೋಷಣೆ ಕೂಗಿದರು.