Asianet Suvarna News Asianet Suvarna News

ಹಕ್ಕು ಕಸಿಯುವುದು ದೇಶದ್ರೋಹಿ ಕೃತ್ಯಕ್ಕಿಂತ ಹೀನ: ಪ್ರಿಯಾಂಕಾ!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಹಿನ್ನೆಲೆ| ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ| ರಾಹುಲ್ ಮುಂದೆ ಅಳಲು ತೋಡಿಕೊಂಡ ಕಾಶ್ಮೀರಿ ಮಹಿಳೆಯ ವಿಡಿಯೋ ಶೇರ್| ಹಕ್ಕು ಕಸಿಯುವುದು ದೇಶದ್ರೋಹಿ ಕೃತ್ಯಕ್ಕಿಂತ ಹೀನ ಎಂದ ಪ್ರಿಯಾಂಕಾ| 

Priyanaka Gandhi Slams Modi Govt Over Jammu and Kashmir Issue
Author
Bengaluru, First Published Aug 25, 2019, 6:22 PM IST

ನವದೆಹಲಿ(ಆ.25): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಶ್ಮೀರಿಗಳ ಪ್ರಜಾಪ್ರಭುತ್ವ ಹಕ್ಕು ಕಿತ್ತುಕೊಳ್ಳುವುದು ದೇಶ ವಿರೋಧಿ ಕೃತ್ಯಕ್ಕಿಂತ ಹೀನ ಕೃತ್ಯ ಎಂದು ಕಿಡಿಕಾರಿದ್ದಾರೆ.

ಕಾಶ್ಮೀರ ಭೇಟಿಗೆ ತೆರಳಿದ್ದ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಾಯಕರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ ಬೆನ್ನಲ್ಲೇ, ಟ್ವೀಟ್ ಮೂಲಕ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ವಿಮಾನದಲ್ಲಿ ರಾಹುಲ್ ಗಾಂಧಿ ಮುಂದೆ ಕಾಶ್ಮೀರಿ ಮಹಿಳೆ ತನ್ನ ಅಳಲು ತೋಡಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿರುವ ಪ್ರಿಯಾಂಕಾ , ರಾಷ್ಟ್ರವಾದ ಹೆಸರಿನಲ್ಲಿ ಕೋಟ್ಯಂತರ ಜನರ ಬಾಯಿ ಮುಚ್ಚಿಸಿದ ಪ್ರಕರಣಗಳಲ್ಲಿ ಇದೂ ಒಂದು ಎಂದು ಹರಿಹಾಯ್ದಿದ್ದಾರೆ. 

Follow Us:
Download App:
  • android
  • ios