ಕೊಂಡಕ್ಕೆ ಬಿದ್ದು ಅರ್ಚಕ ಗಾಯ
ಕೊಂಡೋತ್ಸವದ ವೇಳೆ ಆಯತಪ್ಪಿ ಕೊಂಡಕ್ಕೆ ಅರ್ಚಕ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ರೇವಣ ಸಿದ್ದೇಶ್ವರ ಕೊಂಡದಲ್ಲಿ ನಡೆದಿದೆ.
ಬೆಂಗಳೂರು (ಏ.29): ಕೊಂಡೋತ್ಸವದ ವೇಳೆ ಆಯತಪ್ಪಿ ಕೊಂಡಕ್ಕೆ ಅರ್ಚಕ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ರೇವಣ ಸಿದ್ದೇಶ್ವರ ಕೊಂಡದಲ್ಲಿ ನಡೆದಿದೆ.
ಅರ್ಚಕ ವಿಜಯ್ ಕುಮಾರ್ ಗೆ ಗಂಭೀರ ಗಾಯಗಳಾಗಿವೆ. ಇಂದು ಮುಂಜಾಣೆ ಗ್ರಾಮದ ರೇವಣಸಿದ್ದೇಶ್ಬರ ಸ್ವಾಮಿಯ ಕೊಂಡೋತ್ಸವದಲ್ಲಿ ಘಟನೆ ನಡೆದಿದೆ. ವಿಜಯ್ ಕುಮಾರ್ ರಕ್ಷಿಸಲು ಹೋದ ಇನ್ನಿಬ್ಬರು ಅರ್ಚಕರಾದ ರುದ್ರೇಶ್ ಮತ್ತು ಮಂಜುನಾಥ್’ಗೂ ಗಾಯಗಳಾಗಿವೆ.
ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.