ಜಿಎಸ್ಟಿಗೆ ಚಾಲನೆ ಸಿಕ್ಕಿದ್ದು ಕನ್ನಡಿಗನಿಂದ
'ನಾನು ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವನಾಗಿದ್ದಾಗ ಜಿಎಸ್ಟಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು.
ನವದೆಹಲಿ(ಜು.01): ಜಿಎಸ್ಟಿ ಚಾಲನೆ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕನ್ನಡಿಗ, ಸಾಫ್ಟ್ವೇರ್ ದಿಗ್ಗಜ, ಆಧಾರ್ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು ಸ್ಮರಿಸಿದ್ದು ವಿಶೇಷವಾಗಿತ್ತು. 'ನಾನು ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವನಾಗಿದ್ದಾಗ ಜಿಎಸ್ಟಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಈ ಪ್ರಕ್ರಿಯೆಗೆ ಚಾಲನೆ ಸಿಗಲು ನನಗೆ ಸಹಕರಿಸಿದ್ದು ನಂದನ್ ನಿಲೇಕಣಿ ಅವರು’ ಎಂದು ಸ್ಮರಿಸಿದರು.