ಮೋದಿ ಮನೆಗೆ ಬರುತ್ತಾರೆಂದು ದುಬೈನಲ್ಲಿದ್ದ ಸ್ಟಾಲಿನ್ ಓಡೋಡಿ ಚೆನ್ನೈಗೆ ಬಂದು ಸ್ವಾಗತಕ್ಕೆ ನಿಂತರೆ, ಇನ್ನೊಬ್ಬ ಪುತ್ರ ಅಳಗಿರಿ ಅವರು ಮೋದಿ-ಕರುಣಾನಿಧಿ ಭೇಟಿ ಹೊಸ ರಾಜಕೀಯ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ

ಮೋದಿ ತಮಿಳು ಗೂಗ್ಲಿ ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಮದುವೆಗೆಂದು ಹೋದವರು ವಯೋವೃದ್ಧ ರಾಜಕಾರಣಿ ಕರುಣಾನಿಧಿ ಅವರನ್ನು ಭೇಟಿಯಾಗಿರುವುದು ಕಾಂಗ್ರೆಸ್ ಮತ್ತು ಡಿಎಂಕೆ ಮಧ್ಯದ ಸಂಬಂಧಗಳಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿದೆ. ಮೋದಿ ಮನೆಗೆ ಬರುತ್ತಾರೆಂದು ದುಬೈನಲ್ಲಿದ್ದ ಸ್ಟಾಲಿನ್ ಓಡೋಡಿ ಚೆನ್ನೈಗೆ ಬಂದು ಸ್ವಾಗತಕ್ಕೆ ನಿಂತರೆ, ಇನ್ನೊಬ್ಬ ಪುತ್ರ ಅಳಗಿರಿ ಅವರು ಮೋದಿ-ಕರುಣಾನಿಧಿ ಭೇಟಿ ಹೊಸ ರಾಜಕೀಯ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅನೇಕರ ಪ್ರಕಾರ ಮೋದಿ ಜಯಲಲಿತಾ ನಿಧನರಾದಾಗ ಶಶಿಕಲಾ ತಲೆ ಮೇಲೆ ಕೈನೇವರಿ ಸಿದ ನಂತರವೇ ಶಶಿಕಲಾ ಸಾಮ್ರಾಜ್ಯ ಮುಳುಗಿದ್ದು, ಕರುಣಾನಿಧಿ ಕುಟುಂಬಕ್ಕೆ ಇನ್ನೇನು ಕಾದಿದೆಯೋ.

Add Asianetnews Kannada as a Preferred SourcegooglePreferred

(ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ, ಕನ್ನಡಪ್ರಭ)