Asianet Suvarna News Asianet Suvarna News

ಗೋಮೂತ್ರದಿಂದ ವೇದಿಕೆ ಶುದ್ಧಗೊಳಿಸಿದ ಬಿಜೆಪಿ ಕಾರ್ಯಕರ್ತರಿಗೆ ಪ್ರಕಾಶ್ ರೈ ತಿರುಗೇಟು

ತಾನು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಛಮಾಡಿರುವ ಘಟನೆಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

Prakash Rai Reacts to BJP Workers Act Of Cleansing

ಬೆಂಗಳೂರು: ತಾನು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಛಮಾಡಿರುವ ಘಟನೆಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

#JustAsking ಎಂಬ ಹ್ಯಾಶ್’ಟ್ಯಾಗ್ ಬಳಸಿ, ನಾನು ಎಲ್ಲೇ ಹೋದ್ರೂ ಈ ರೀತಿ ಶುದ್ಧ ಮಾಡ್ತಿರಾ ಎಂದು ಪ್ರಕಾಶ್ ರೈ ಟ್ವೀಟಿಸಿ ಬಿಜೆಪಿ ಕಾರ್ಯಕರ್ತರ ಕಾಲೆಳೆದಿದ್ದಾರೆ.

ಕಳೆದ ಜ. 13ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಭಾಗವಹಿಸಿದ್ದರು.

ಪ್ರಕಾಶ್ ರೈ ಭಾಗವಹಿಸುವಿಕೆಯಿಂದ ಆ ಸ್ಥಳ ಅಪವಿತ್ರಗೊಂಡಿದೆಯೆಂದು ಹೇಳಿ, ಗೋಮೂತ್ರ ಸಿಂಪಡಿಸಿ ಆ ವೇದಿಕೆಯನ್ನು ಗೋಮೂತ್ರದಿಂದ ಶುದ್ಧಗೊಳಿಸಿದ್ದಾರೆ.

ಪ್ರಕಾಶ್ ರೈ ಸಮಾಜ ಸುಧಾರಕರಲ್ಲ, ಸಮಾಜ ಸುಧಾರಣೆಗೆ ಯಾವುದೇ ಕೊಡುಗೆಯಿಲ್ಲ. ಹಿಂದೂ ಧರ್ಮಕ್ಕೆ ಅವರ ಅವಶ್ಯಕತೆಯಿಲ್ಲ, ಎಂದು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios