ಬ್ರಾಹ್ಮಣ ಬುದ್ದೀ ಬಿಟ್ಟುಬಿಡಿ: ಸಂಸದ ಪ್ರಹ್ಲಾದ್ ಜೋಶಿಗೆ ಬೆದರಿಕೆ ಪತ್ರ
ಸಂಸದ ಪ್ರಹ್ಲಾದ್ ಜೋಶಿಗೆ ಬೆದರಿಕೆ ಪತ್ರ
ಹುಬ್ಬಳ್ಳಿ(ಫೆ.03): ಸಂಸದ ಪ್ರಹ್ಲಾದ್ ಜೋಶಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ನಿಮ್ಮನ್ನು ನೋಡಿಕೊಳ್ಳುತ್ತವೆ ಎಂದು ಉಲ್ಲೇಖಿಸಿ ಪತ್ರ ಬರೆಯಲಾಗಿದ್ದು, ನಿಮ್ಮ ಬ್ರಾಹ್ಮಣ ಬುದ್ದಿ ಬಿಟ್ಟು ಬಿಡಿ. ನಮ್ಮ ವಿಕೆ ಬಾಸ್ (ವಿನಯ್ ಕುಲಕರ್ಣಿ ತಂಟೆಗೆ ಬರಬೇಡಿ. ಯೋಗಿಶ್ ಗೌಡ ಕೊಲೆ ಕೇಸ್'ಅನ್ನು ಸಿಬಿಐಗೆ ಒಪ್ಪಿಸಿ ಎಂದು ಹೋರಾಟ ಮಾಡುತ್ತೀರಿ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪತ್ರದ ಲಕೋಟೆ ಮೇಲೆ ಮಂಜುನಾಥ ಎಂಬ ಹೆಸರಿದ್ದು, ಹುಬ್ಬಳ್ಳಿ--ಧಾರವಾಡ ಪೊಲೀಸ್ ಆಯುಕ್ತರಿಗೆ ಜೋಶಿಯವರು ದೂರು ನಿಡಿದ್ದಾರೆ