Asianet Suvarna News Asianet Suvarna News

ಬಾಳೆಹೊನ್ನೂರು: ಪೊಲೀಸ್ ಠಾಣೆಯಲ್ಲೇ ಪೇದೆ ಆತ್ಮಹತ್ಯೆ

ಪೊಲೀಸ್ ಠಾಣೆಯಲ್ಲೇ ಪೇದೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ನಡೆದಿದೆ. 

Police Constable Suicide In Balehonnur
Author
Bengaluru, First Published Apr 19, 2019, 10:39 AM IST

ಚಿಕ್ಕಮಗಳೂರು :  ಪೊಲೀಸ್ ಠಾಣೆಯಲ್ಲೇ ಪೇದೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ನಡೆದಿದೆ. 

ಬಾಳೆ ಹೊನ್ನೂರು ಪೊಲೀಸ್ ಠಾಣೆಯಲ್ಲೇ ಪೇದೆ ಯೋಗೀಶ್ (31) ನೇಣಿಗೆ ಶರಣಾಗಿದ್ದಾರೆ.  ಗುರುವಾರ ಮಧ್ಯರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಸಹ ದೊರಕಿಲ್ಲ. ಇನ್ನೂ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

Follow Us:
Download App:
  • android
  • ios