ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ​ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ  ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.

ಬೆಂಗಳೂರು(ಆ.26): ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ​ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.

ರೌಡಿ ಶೀಟರ್​ ನದೀಮ್​ ಗ್ಯಾಂಗ್​ ರೌಡಿ ಉಮರ್​ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗಿತ್ತು. ಈ ದೃಶ್ಯ ಕಂಡು ಕೊಲೆ ತಡೆಯಲು ಹೋದ ಡಿಜೆ ಹಳ್ಳಿ ಸಬ್​ ಇನ್ಸ್​​ಪೆಕ್ಟರ್ ನಯಾಜ್ ಅಹಮದ್ ಮೇಲೆ ನದೀಮ್​ ಗ್ಯಾಂಗ್​ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸಬ್​ ಇನ್ಸ್​ಪೆಕ್ಟರ್​ ನಯಾಜ್​ ಅಹಮದ್'​ಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೌಡಿ ಶೀಟರ್​ ನದೀಮ್​ ಗ್ಯಾಂಗ್​ಗೆ ಪೊಲೀಸರು ಬಲೆ ಬೀಸಿದ್ದಾರೆ.