ಮಕ್ಕಳನ್ನು ಕಿಡ್ನಾಪ್​ ಮಾಡಿ ಭಿಕ್ಷಾಟನೆ ಬಳಕೆ ಮಾಡುತ್ತಿದ್ದ ಭಯಾನಕ ಗ್ಯಾಂಗ್'ನ್ನು ಪತ್ತೆ ಹಚ್ಚಿದ್ದ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ರಹಸಯ ಕಾರ್ಯಾಚರಣೆಯ ಮೂಲಕ ಇವರ ಬಣ್ಣ ಬಯಲು ಮಾಡಿತ್ತು. ಕವರ್​ ಸ್ಟೋರಿ ಕಾರ್ಯಾಚರಣೆಯಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ಬಿಕ್ಷುಕರ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಿದ್ದಾರೆ.

ಬೆಂಗಳೂರು(ಜೂ.10): ಮಕ್ಕಳನ್ನು ಕಿಡ್ನಾಪ್​ ಮಾಡಿ ಭಿಕ್ಷಾಟನೆ ಬಳಕೆ ಮಾಡುತ್ತಿದ್ದ ಭಯಾನಕ ಗ್ಯಾಂಗ್'ನ್ನು ಪತ್ತೆ ಹಚ್ಚಿದ್ದ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ರಹಸಯ ಕಾರ್ಯಾಚರಣೆಯ ಮೂಲಕ ಇವರ ಬಣ್ಣ ಬಯಲು ಮಾಡಿತ್ತು. ಕವರ್​ ಸ್ಟೋರಿ ಕಾರ್ಯಾಚರಣೆಯಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ಬಿಕ್ಷುಕರ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಿದ್ದಾರೆ.

ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಚಂದ್ರಾ ನಾಯಕ್​ ನೇತೃತ್ವದಲ್ಲಿ ಮೆಜೆಸ್ಟಿಕ್​​ ಸುತ್ತಮುತ್ತ ಭಿಕ್ಷುಕರ ನಡೆದ ಈ ದಾಳಿಯಲ್ಲಿ 150ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಲಾಗಿದೆ. ಈ ವೇಳೆ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳತ್ತಿದ್ದ ಈ ಮಾಫಿಯಾದ ಕಿಂಗ್​​​ಪಿನ್​​ ಕೂಡಾ ಅರೆಸ್ಟ್​ ಆಗಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ರಾಜಸ್ತಾನ, ಬಿಹಾರ, ಮಧ್ಯಪ್ರದೇಶ ಮೂಲದ ಗ್ಯಾಂಗ್'ಗಳೂ ಜೈಲು ಪಾಲಾಗಿವೆ. ಇದು ಕವರ್ ಸ್ಟೋರಿ ತಂಡದ ಬಿಗ್ ಇಂಪ್ಯಾಕ್ಟ್.