ಯೋಧರ ಆರೋಪ: ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಚೇರಿ ಸೂಚನೆ
ಸಿಆರ್’ಪಿಎಫ್ ಯೋಧರಿಗೆ ಪಿಂಚಣಿ, ವೈದ್ಯಕೀಯ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಯೋಧ ಜೀತ್ ಸಿಂಗ್ ಆರೋಪಿಸಿದ್ದಾರೆ.
ನವದೆಹಲಿ (ಜ.12): ಫೇಸ್ಬುಕ್ನಲ್ಲಿ ಸಿಆರ್’ಪಿಎಫ್ ಪೇದೆ ಜೀತ್ ಸಿಂಗ್ ವಿಡಿಯೋ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯವು ಗೃಹ ಇಲಾಖೆಗೆ ಸೂಚಿಸಿದೆ.
ಸಿಆರ್’ಪಿಎಫ್ ಯೋಧರಿಗೆ ಪಿಂಚಣಿ, ವೈದ್ಯಕೀಯ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಯೋಧ ಜೀತ್ ಸಿಂಗ್ ಆರೋಪಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮೊನ್ನೆ ತೇಜ್ ಬಹದ್ದೂರ್ ಎಂಬ ಯೋಧ, ಹಿರಿಯ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದಿಂದ ಆಹಾರ ಮತ್ತಿತರ ಮೂಲಭೂತ ಸೌಕರ್ಯಗಳು ಸೈನಿಕರಿಗೆ ಸರಿಯಾಗಿ ತಲುಪುತ್ತಿಲ್ಲವೆಂದು ವಿಡಿಯೊವೊಂದರಲ್ಲಿ ಆರೋಪಿಸಿದ್ದರು.