ನೋಟು ನಿಷೇಧದಿಂದ ತೊಂದರೆ ಅನುಭವಿಸುತ್ತಿರುವವರು ಬಡವರು ಮತ್ತು ಮಧ್ಯಮ ವರ್ಗದವರು. ಯಾವುದೇ ತಯಾರಿಯಿಲ್ಲದೇ ನೋಟು ನಿಷೇಧ ಮಾಡಿರುವುದನ್ನು ನೋಡಿದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯವರು ತಮ್ಮ ರಾಜಕೀಯ ಹಿತದೃಷ್ಟಿಗಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.  

ಉತ್ತರ ಪ್ರದೇಶ ( ನ.21): ಉತ್ತರ ಪ್ರದೇಶ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ರಾಜಕೀಯ ಹಿತಾಸಕ್ತಿಗಾಗಿ ಎನ್ ಡಿಎ ಸರ್ಕಾರ ಹಣದ ಅಪಮೌಲ್ಯವನ್ನು(ಡಿಮೊನಿಟೈಸೇಶನ್) ಘೋಷಿಸಿದೆ ಎಂದು ಬಿಎಸ್ ಪಿ ವರಿಷ್ಟೆ ಮಾಯಾವತಿ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುವಾಗ " ಪ್ರಧಾನಿ ಮೋದಿಯವರಿಗೆ ಗಟ್ಸ್ ಇದ್ದರೆ ಸಂಸತ್ತಿಗೆ ಬಂದು ವಿರೋಧ ಪಕ್ಷದವರನ್ನು ಎದುರಿಸಲಿ" ಎಂದು ದಿಟ್ಟತನ ತೋರಿಸಿದ್ದಾರೆ.

ನೋಟು ನಿಷೇಧದಿಂದ ತೊಂದರೆ ಅನುಭವಿಸುತ್ತಿರುವವರು ಬಡವರು ಮತ್ತು ಮಧ್ಯಮ ವರ್ಗದವರು. ಯಾವುದೇ ತಯಾರಿಯಿಲ್ಲದೇ ನೋಟು ನಿಷೇಧ ಮಾಡಿರುವುದನ್ನು ನೋಡಿದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯವರು ತಮ್ಮ ರಾಜಕೀಯ ಹಿತದೃಷ್ಟಿಗಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.