ಜೈ ಶ್ರೀರಾಮ್‌ ಘೋಷಣೆ ಮೂಲಭೂತ ಹಕ್ಕೆಂದು ಆದೇಶಿಸಲು ಕೋರ್ಟ್‌ಗೆ ಮೊರೆ| ಮನವಿ ಸಲ್ಲಿಸಿದ ವಕೀಲ ಪಾರ್ಥ ಘೋಷ್‌ 

ಕೋಲ್ಕತಾ[ಜೂ.15]: ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ಬೆನ್ನಲ್ಲೇ, ಇಂಥ ಘೋಷಣೆ ಕೂಗುವುದನ್ನು ಮೂಲಭೂತ ಹಕ್ಕೆಂದು ಸಾರಬೇಕೆಂದು ಕೋರಿ ವಕೀಲ ಪಾರ್ಥ ಘೋಷ್‌ ಎನ್ನುವವರು ಕೋಲ್ಕತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಅರ್ಜಿಯ ತ್ವರಿತ ವಿಚಾರಣೆಗೆ ನಿರಾಕರಿಸಿದ ನ್ಯಾಯಾಲಯ, ವಿಚಾರಣೆಯನ್ನು 4 ವಾರ ಮುಂದೂಡಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೋಗುವಾಗ ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಹಲವರನ್ನು ಬಂಧಿಸಲಾಗಿತ್ತು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು.