ಜೈ ಶ್ರೀರಾಮ್ ಘೋಷಣೆ ಮೂಲಭೂತ ಹಕ್ಕೆಂದು ಆದೇಶಿಸಲು ಕೋರ್ಟ್ಗೆ ಮೊರೆ| ಮನವಿ ಸಲ್ಲಿಸಿದ ವಕೀಲ ಪಾರ್ಥ ಘೋಷ್
ಕೋಲ್ಕತಾ[ಜೂ.15]: ಜೈಶ್ರೀರಾಮ್ ಎಂದು ಘೋಷಣೆ ಕೂಗಿದ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ಬೆನ್ನಲ್ಲೇ, ಇಂಥ ಘೋಷಣೆ ಕೂಗುವುದನ್ನು ಮೂಲಭೂತ ಹಕ್ಕೆಂದು ಸಾರಬೇಕೆಂದು ಕೋರಿ ವಕೀಲ ಪಾರ್ಥ ಘೋಷ್ ಎನ್ನುವವರು ಕೋಲ್ಕತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಈ ಅರ್ಜಿಯ ತ್ವರಿತ ವಿಚಾರಣೆಗೆ ನಿರಾಕರಿಸಿದ ನ್ಯಾಯಾಲಯ, ವಿಚಾರಣೆಯನ್ನು 4 ವಾರ ಮುಂದೂಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೋಗುವಾಗ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಹಲವರನ್ನು ಬಂಧಿಸಲಾಗಿತ್ತು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
