ಕುಮಾರಸ್ವಾಮಿ ಸಿಎಂ ಆದ್ರೆ ಬರಿ ಕಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ  ಹರಕೆ ಹೊತ್ತಿದ್ದ ಅಂಗವಿಕಲ ಮಹಿಳೆ ಬೆಟ್ಟ ಹತ್ತಿ ಹರಕೆ ಸಲ್ಲಿಸಿದ್ದಾರೆ. 

ಬೆಂಗಳೂರು (ಮೇ. 27): ಕುಮಾರಸ್ವಾಮಿ ಸಿಎಂ ಆದ್ರೆ ಬರಿ ಕಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ ಹರಕೆ ಹೊತ್ತಿದ್ದ ಅಂಗವಿಕಲ ಮಹಿಳೆ ಬೆಟ್ಟ ಹತ್ತಿ ಹರಕೆ ಸಲ್ಲಿಸಿದ್ದಾರೆ. 

Add Asianetnews Kannada as a Preferred SourcegooglePreferred

ಕುಮಾರಸ್ವಾಮಿ ಅಭಿಮಾನಿಯಾಗಿರೋ ಗುಲ್ಬರ್ಗಾ ಮೂಲದ ಸಂಗೀತಾ 2006 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜನತಾದರ್ಶನದಲ್ಲಿ ಎಚ್ ಡಿಕೆಯನ್ನು ಬೇಟಿ ಮಾಡಿದ್ದಾರೆ. ಅಂಗವಿಕಲ ಕೋಟಾದಲ್ಲಿ ಮೆಟ್ರೋದಲ್ಲಿ ಸಂಗೀತಾಳಿಗೆ ಉದ್ಯೋಗಕ್ಕೆ ನೆರವು ನೀಡಿದ್ದಾರೆ ಹೆಚ್ ಡಿಕೆ. ಮತ್ತೊಮ್ಮೆ ಕುಮಾರಸ್ವಾಮಿ ಸಿಎಂ ಆದ್ರೆ ಮೆಟ್ಟಿಲು ಮೂಲಕ ಬೆಟ್ಟ ಹತ್ತುತ್ತೇನೆಂದು ಸಂಗೀತಾ ಹರಕೆ ಹೊತ್ತಿದ್ದಾರೆ. 

ಕುಮಾರಸ್ವಾಮಿ ಸಿಎಂ ಆದ ಹಿನ್ನಲೆ ಕುಟುಂಬ ಸಮೇತ ಸಂಗೀತಾ ಕುಟುಂಬ ಸಮೇತ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ಸಂಗೀತಾಳಿಗೆ ಪತಿ ಮತ್ತು ಕುಟುಂಬದವರು ಸಾಥ್ ನೀಡಿದ್ದಾರೆ.