Asianet Suvarna News Asianet Suvarna News

ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿ ಬೇಕು: ಕೇಜ್ರಿವಾಲ್

ದೇಶದ 10 ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಉಪಚುನಾವಣೆ ಫಲಿತಾಂಶ ಮೋದಿ ವಿರುದ್ದದ ಜನಾಕ್ರೋಶ ಎಂದು ಬಣ್ಣಿಸಿದರು.

People miss educated PM like Manmohan Singh says Kejriwal

ನವದೆಹಲಿ [ಮೇ 31]: ದೇಶದ 10 ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಉಪಚುನಾವಣೆ ಫಲಿತಾಂಶ ಮೋದಿ ವಿರುದ್ದದ ಜನಾಕ್ರೋಶ ಎಂದು ಬಣ್ಣಿಸಿದರು.

ದೇಶದ ಜನತೆ ಮೋದಿ ಆಡಳಿತದಿಂದ ಬೇಸತ್ತಿದ್ದು, ಉಪಚುನಾವಣೆ ಮೂಲಕ ತಮ್ಮ ಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಹೇಳಿದರು. ಮೋದಿ ಅವರಿಗೆ ಪರ್ಯಾಯ ಯಾರು ಎಂದು ಜನ ಕೇಳುತ್ತಿದ್ದು, ಈ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮಾಜಿ ಪಿಎಂ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದ ಕೇಜ್ರಿವಾಲ್, ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿಯನ್ನು ದೇಶ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಅವರು, ನೀತಿ ನಿರೂಪಣೆಯಲ್ಲಿ ಮನಮೋಹನ್ ಅವರನ್ನು ಮೀರಿಸಬಲ್ಲ ಪ್ರಧಾನಿ ಯಾರೂ ಇಲ್ಲ ಎಂದಿದ್ದಾರೆ. 

Follow Us:
Download App:
  • android
  • ios