‘ಭಾರತ ಬದಲಾಗಿದೆ, ಒಳಗನಿವರೇ ಅದನ್ನು ಗುರುತಿಸಿದ್ದಾರೆ’
ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ದೊಡ್ಡ ಜವಾಬ್ದಾರಿ ನಿರ್ವಹಿಸಿದ್ದ ಜೈಶಂಕರ್ ಇದೀಗ ದೇಶದ ವಿದೇಶಾಂಗ ಮಂತ್ರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗುತ್ತಿರುವ ಭಾರತದ ಸ್ಥಾನ ಮಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ[ಜೂ. 05] ಕಳೆದ 5 ವರ್ಷದಲ್ಲಿ ಭಾರತದ ಸ್ಥಾನಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗಿರುವುದನ್ನು ಭಾರತದ ಬಹುಪಾಲು ಜನರು ಗಮನಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಚೀನಾ ವೇಗವಾಗಿ ಬೆಳೆಯುತ್ತಿದೆ ಅದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಲೋಬಲ್ ರಿಬ್ಯಾಲೆಂಸ್ಸಿಂಗ್ ಆಗುತ್ತಿದೆ. ಜತೆಗೆ ಭಾರತ ಸಹ ತನ್ನಸ್ಥಾನ ಬದಲಾಯಿಸಿಕೊಂಡಿದೆ ಎಂದರು.
ನವದೆಹಲಿಯ ಸೆಮಿನಾರ್ ಒಂದರಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರ ಕಳೆದ 5 ವರ್ಷಗಳಿಂದ ದೇಶದ ಹೊರಗೆ ಮತ್ತು ಒಳಗೆ ನಿಂತು ಯೋಜನೆಗಳನ್ನು ರೂಪಿಸುತ್ತಿದೆ. ಪ್ರದೇಶ ಆರ್ಥಿಕಾಭಿವೃದ್ಧಿ ಮತ್ತು ಅತ್ಯುತ್ತಮ ವಿದೇಶಾಂಗ ನೀತಿಗೆ ಆದ್ಯತೆ ನೀಡಿಕೊಂಡೇ ಬಂದಿದ್ದೇವೆ ಎಂದರು.