ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ  ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು.  ಈಗ ಆ ಪ್ರಕರಣಕ್ಕೆ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಸುಭಾಷ್​ನೇ ಕೊಲೆಗಾರ ಎಂಬ  ಹೊಸದೊಂದು ಟ್ವಿಸ್ಟ್  ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್​ ಕಾನ್ಸ್ಟೇಬಲ್​ ಸುಭಾಷ್​ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು (ಮೇ.24): ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು. ಈಗ ಆ ಪ್ರಕರಣಕ್ಕೆ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಸುಭಾಷ್​ನೇ ಕೊಲೆಗಾರ ಎಂಬ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್​ ಕಾನ್ಸ್ಟೇಬಲ್​ ಸುಭಾಷ್​ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ಬ್ಯಾಪ್ಟಿಸ್ಟ್ ​ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಸುಭಾಷ್​ನನ್ನ ಸಂಜೆ ವೇಳೆ ನಾರ್ಮಲ್​ ವಾರ್ಡ್​ಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ. ನಂತರ ಆತನ ವಿಚಾರಣೆ ಮುಂದುವರೆಯಲಿದೆ . ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು, ಸುಭಾಷ್​ ಸಿಎಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಬೆಟ್ಟಿಂಗ್​ನಲ್ಲಿ ಮುಳುಗಿರುತ್ತಿದ್ದ ಎಂದು ಆರೋಪಿಸಿದ್ದಾರೆ.

ಕ್ರಿಕೆಟ್​ ಬೆಟ್ಟಿಂಗ್​ ಚಟದಿಂದ ವಿಪರೀತ ಸಾಲ ಮಾಡಿಕೊಂಡಿದ್ದಕ್ಕೆ ಸಾಲಗಾರರು ಪದೇ ಪದೇ ಕೇಳುತ್ತಿದ್ದರು. ಹೀಗಾಗಿ ಈತ ತನ್ನ ಕುಟುಂಬದೊಂದಿಗೆ ಸಾವಿಗೆ ಶರಣಾಗಲು ಮುಂದಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಕೃತ್ಯ ಪೂರ್ವ ನಿಯೋಜಿತನಾ ಅನ್ನೋ ಅನುಮಾನ ಶುರುವಾಗಿದೆ. ಯಾಕೆಂದರೆ ಸುಭಾಷ್​ ತನ್ನ ಸೋದರನಿಗೆ ಆತ್ಮಹತ್ಯೆಗೂ ಮುನ್ನಾ ದಿನವೇ ಕರೆ ಮಾಡಿ ಬೆಳಗ್ಗೆ ಬರುವುದಕ್ಕೆ ಹೇಳಿದ್ದನೆಂದು ಪೊಲೀಸ್​ ಮೂಲಗಳ ಮಾಹಿತಿ ಹೇಳುತ್ತವೆ. ಇದರಿಂದ ಈತ ತನ್ನ ಕುಟುಂಬಕ್ಕೆ ವಿಷವನ್ನ ಇಂಜೆಕ್ಟ್​ ಮಾಡಿ ಅವರು ಸತ್ತ ಬಳಿಕ ಟ್ಯಾಬ್ಲೆಟ್​ ನುಂಗಿ ಆತ್ಮ ಹತ್ಯೆಗೆ ಯತ್ನಿಸುವಂತೆ ನಾಟಕವಾಡಿದ್ದಾನಾ ಅನ್ನೋ ಅನುಮಾನ ಶುರುವಾಗಿದೆ. ಇನ್ನು ಈ ಸಂಬಂಧ ಕೊಟ್ರೇಶ್​ನನ್ನೂ ತನಿಖೆಗೊಳಪಡಿಸುವ ಸಾಧ್ಯತೆ ಇದೆ.

ಸದ್ಯ ವಿಪರೀತ ಶೊಕಿಲಾಲನಾಗಿದ್ದ ಸುಭಾಷ್​ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿದ್ದಲ್ಲಿ ಆತನೂ ವಿಷ ಸೇವಿಸುತ್ತಿದ್ದ ಆದರೆ ಆತ ಸ್ಲೀಪಿಂಗ್​ ಟ್ಯಾಬ್ಲೆಟ್​ ನುಂಗಿದ್ಯಾಕೆ ಎಂಬ ಹಲವಾರು ಪ್ರಶ್ನೆಗಳು ಮೂಡಿದೆ. ಈತನ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.