Asianet Suvarna News Asianet Suvarna News

ಟೆಲಿಕಾಂ ಕ್ಷೇತ್ರಕ್ಕೆ ಪತಂಜಲಿ?: ಸಮೃದ್ಧಿ ಸಿಮ್ ಮರ್ಮವೇನು?

ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

Patanjali launching a Swadeshi SIM with BSNL?

ನವದೆಹಲಿ[ಮೇ 29]: ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

ಆದರೆ ಈ ಸಮೃದ್ಧಿ ಸಿಮ್ ಕೇವಲ ಪತಂಜಲಿ ಕಂಪನಿಯ ನೌಕರರಿಗೆ ಮಾತ್ರ ಲಭ್ಯವಿದ್ದು,  ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಹೊಂದಿರುವರಿಗೆ ಪತಂಜಲಿ ಉತ್ಪನ್ನಗಳಲ್ಲಿ ಶೇ.10 ರಿಯಾಯಿತಿ ಸಿಗಲಿದೆ. ಸಾರ್ವಜನಿಕರಿಗೂ ಸಮೃದ್ಧಿ ಸಿಮ್ ಸಿಗಲಿದೆ ಎಂದು ಈ ಮೊದಲು ಹೇಳಲಾಗಿತ್ತಾದರೂ, ಇದೀಗ ಕೇವಲ ಕಂಪನಿ ನೌಕರರಿಗೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಲಾಗಿದೆ.

ರೂ. 144ಗೆ 2ಜಿಬಿ ಡೇಟಾ 100 ಎಸ್‌ಎಂಎಸ್‌ಗಳು ಮತ್ತು ರಾಷ್ಟ್ರದಾದ್ಯಂತ ಅನಿಯಮಿತ ಕರೆಗಳನ್ನು ಮಾಡುವ ಆಫರ್‍ ನೀಡಲಾಗಿದೆ .ಇದಲ್ಲದೆ ಸಿಮ್‌ ಕಾರ್ಡ್‌ ಜತೆ ಅಫಘಾತ ವಿಮೆ, ₹2.5 ಲಕ್ಷ . ವರೆಗೆ ವೈದ್ಯಕೀಯ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ. ವರೆಗೆ ಜೀವ ವಿಮೆಯನ್ನು ಅಳವಡಿಸಲಾಗಿದೆ.

Follow Us:
Download App:
  • android
  • ios