Asianet Suvarna News Asianet Suvarna News

ಪಾಕ್'ನಲ್ಲಿ ಮಾನವೀಯತೆಗೆ ಅವಮಾನ : ಸುಷ್ಮಾ ಸ್ವರಾಜ್

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಇಂದಿನ ಲೋಕಸಭಾ ಅಧಿವೇಶನದಲ್ಲಿ ಕುಲಭೂಷಣ್ ಜಾಧವ್ ಅವರ ವಿಚಾರ ಪ್ರಸ್ತಾಪಿಸಿದ್ದಾರೆ.

Pakistan made mockery of humanity during Jadhavs family meet says Sushma

ನವದೆಹಲಿ (ಡಿ.28): ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಇಂದಿನ ಲೋಕಸಭಾ ಅಧಿವೇಶನದಲ್ಲಿ ಕುಲಭೂಷಣ್ ಜಾಧವ್ ಅವರ ವಿಚಾರ ಪ್ರಸ್ತಾಪಿಸಿದ್ದಾರೆ.

ಪಾಕ್ ಜೈಲಲ್ಲಿ ಇರುವ ಕುಲಭೂಷಣದ ಜಾಧವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬ ಅಲ್ಲಿಗೆ ತೆರಳಿದ್ದ ವೇಳೆ ಮಾನವೀಯತೆಯನ್ನು ಮರೆತು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.

ಮನುಷ್ಯತ್ವಕ್ಕೆ ಅವಮಾನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಗಾಜಿನ ಗೋಡೆಗಳ ಹಿಂದೆ ಇರಿಸಿ ಭೇಟಿ ಮಾಡಲು ಅವಕಾಶ  ಕೊಟ್ಟಿದ್ದಲ್ಲದೇ ತಾಳಿಯನ್ನು ಬಿಚ್ಚುವಂತೆ ಅಲ್ಲಿ ಜಾಧವ್ ಪತ್ನಿಗೆ ಹೇಳಲಾಗಿತ್ತು.

Follow Us:
Download App:
  • android
  • ios