ಪದ್ಮ ಪ್ರಶಸ್ತಿ ನಾಮಾಂಕಿತ ಪಟ್ಟಿಯಿಂದ ಕೆಲವರು ಹೊರಗೆ
ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ನಾಮಾಂಕಿತರಾದ ಕೆಲವು ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳ ಹೆಸರನ್ನು ಸರ್ಕಾರ ತಿರಸ್ಕರಿಸಿದೆ. ಬಿಜೆಡಿ ಪಕ್ಷದ ಸಂಸದ ಬೈಜಯಂತ್ ಪಾಂಡಾ, ಆಧ್ಯಾತ್ಮಿಕ ಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್, ಗಗನಸಖಿ ದಿ.ನೀರ್ಜಾ ಬಾನೋಟ್, ಮಾಜಿ ಕ್ರಿಕೆಟ್ ಕ್ಯಾಪ್ಟನ್ ಧೋನಿ, ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ರವರ ಹೆಸರನ್ನು ತಿರಸ್ಕರಿಸಿದೆ. ಸಾರ್ವಜನಿಕರಿಂದ ಗೃಹ ಇಲಾಖೆಗೆ 18,768 ಮಂದಿಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ನವದೆಹಲಿ (ಮಾ.27): ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ನಾಮಾಂಕಿತರಾದ ಕೆಲವು ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳ ಹೆಸರನ್ನು ಸರ್ಕಾರ ತಿರಸ್ಕರಿಸಿದೆ. ಬಿಜೆಡಿ ಪಕ್ಷದ ಸಂಸದ ಬೈಜಯಂತ್ ಪಾಂಡಾ, ಆಧ್ಯಾತ್ಮಿಕ ಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್, ಗಗನಸಖಿ ದಿ.ನೀರ್ಜಾ ಬಾನೋಟ್, ಮಾಜಿ ಕ್ರಿಕೆಟ್ ಕ್ಯಾಪ್ಟನ್ ಧೋನಿ, ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ರವರ ಹೆಸರನ್ನು ತಿರಸ್ಕರಿಸಿದೆ. ಸಾರ್ವಜನಿಕರಿಂದ ಗೃಹ ಇಲಾಖೆಗೆ 18,768 ಮಂದಿಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಈ ಮೇಲಿನವರ ಹೆಸರನ್ನು ತಿರಸ್ಕರಿಸಲು ಸರ್ಕಾರ ಕಾರಣಗಳನ್ನು ನೀಡಿಲ್ಲ.
ಈ ತಿಂಗಳ ಕೊನೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುವ ಸಾಧ್ಯತೆಯಿದೆ.