ಗೃಹ ಸಚಿವರ ಪಿಎಗೆ ಎಡಿಜಿಪಿ ಛೀಮಾರಿ..! ಪಿಎಸ್'ಐ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಕೇಳಲು ಹೋಗಿದ್ದನೇ ಈ ಆಪ್ತಸಹಾಯಕ?
ತನ್ನ ಮಗ ಸಬ್'ಇನ್ಸ್'ಪೆಕ್ಟರ್ ಆಗಲು ಅವಕಾಶವಿದೆಯಾ ಎಂದು ಪರೋಕ್ಷವಾಗಿ ಪ್ರಶ್ನೆಪತ್ರಿಕೆ ಪಡೆಯಲು ಎಡಿಜಿಪಿಯಿಂದ ಕೇಶವ್ ಬಯಸಿದ್ದಾನೆ.
ಬೆಂಗಳೂರು(ಡಿ. 04): ಸಬ್'ಇನ್ಸ್'ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇಳಲು ಹೋಗಿ ಎಡಿಜಿಪಿ ರಾಘವೇಂದ್ರ ಔರದ್ಕರ್'ರಿಂದ, ಗೃಹಸಚಿವರ ಪಿಎ ಮಂಗಳಾರತಿ ಮಾಡಿಸಿಕೊಂಡ ಘಟನೆ ಸಿಐಡಿ ಕೇಂದ್ರ ಕಚೇರಿಯಲ್ಲಿ ನಿನ್ನೆ ನಡೆದಿರುವುದು ಬೆಳಕಿಗೆ ಬಂದಿದೆ. ಗೃಹಸಚಿವರ ಆಪ್ತಸಹಾಯಕನ ಹೆಸರು ಕೇಶವ್ ಎಂದು ತಿಳಿದುಬಂದಿದೆ.
ನಿನ್ನೆ ಮಧ್ಯಾಹ್ನ 3.30 ರ ಸಮಯದಲ್ಲಿ ಎಡಿಜಿಪಿ ರಾಘವೇಂದ್ರ ಔರದ್ಕರ್ ಬಳಿ ತೆರಳಿದ್ದ ಕೇಶವ್, ತನ್ನ ಮಗ ಸಬ್'ಇನ್ಸ್'ಪೆಕ್ಟರ್ ಆಗಲು ಅವಕಾಶವಿದೆಯಾ ಎಂದು ಪರೋಕ್ಷವಾಗಿ ಪ್ರಶ್ನೆಪತ್ರಿಕೆ ಪಡೆಯಲು ಎಡಿಜಿಪಿಯಿಂದ ಬಯಸಿದ್ದಾನೆ. ಕೇಶವ್'ನ ಈ ಉದ್ದೇಶವನ್ನು ತಿಳಿದ ಎಡಿಜಿಪಿ ರಾಘವೇಂದ್ರ ಔರಾದ್ಕರ್ ಅವರು ಕೇಶವ್'ನನ್ನು 23 ನಿಮೀಷಗಳ ಕಾಲ ತೀವ್ರ ತರಾಟೆಗೆ ತಗೆದುಕೊಂಡು ಆತನಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ದಾರೆ.