ಇದೀಗ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್​ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿದೆ.

ಚೆನ್ನೈ (ಫೆ.16): ಪಳನಿಸ್ವಾಮಿಗೆ ಸಿಎಂ ಪಟ್ಟ ಖಚಿತವಾಗುತ್ತಿದ್ದಂತೆ, ಪನ್ನೀರ್ ಬಣ ಸಿಡಿದೆದ್ದಿದೆ.

ಹೇಗಾದರೂ ಮಾಡಿ ಶಶಿಕಲಾ ಆಪ್ತ ಪಳನಿಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ನಿರ್ಧರಿಸಿರುವ ಪನ್ನೀರ್​ ಬಣ ನಾನಾ ತಂತ್ರಗಳನ್ನು ಮಾಡ್ತಿದೆ.

ಇದೀಗ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್​ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿದೆ.

ಪನ್ನೀರ್​ ಸೆಲ್ವಂ ಗುಂಪಿನಲ್ಲಿರುವ ರಾಜ್ಯಸಭಾ ಸದಸ್ಯ ಮೈತ್ರಿಯನ್​​ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ಅರ್ಜಿ ವಿಚಾರಣೆಗೆ ಆಯೋಗ ಮಾನ್ಯ ಮಾಡಿದೆ. ಇಂದೇ ಇದರ ವಿಚಾರಣೆ ನಡೆದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.