ಅ.4ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದಂತೆ ಅ-.1ರಿಂದ 6ರವರೆಗೆ ತಮಿಳುನಾಡಿಗೆ 3.1 ಟಿಎಂಸಿ ನೀರು ಹರಿಸಲಾಗಿದ್ದು ಬಳಿಕ ಅ. 7ರಿಂದ ಪ್ರತಿದಿನವೂ 2 ಸಾವಿರ ಕ್ಯುಸೆಕ್‌ ಲೆಕ್ಕಾಚಾರದಂತೆ ನೀರು ಹರಿಸಲಾಗುತ್ತಿದೆ. ಅ.4ರ ವೇಳೆಗೆ ರಾಜ್ಯದ ಕಾವೇರಿ ಜಲಾಶಯಗಳಲ್ಲಿ 33.67 ಟಿಎಂಸಿ ನೀರಿನ ಸಂಗ್ರಹವಿದ್ದರೆ ಮಂಗಳವಾರ (ಅ.11) ಈ ಜಲಾಶಯಗಳಲ್ಲಿ ನೀರಿನ ಮಟ್ಟ25.09 ಟಿಎಂಸಿಗೆ ಕುಸಿದಿದೆ. ಒಟ್ಟು ಸುಮಾರು 8.58 ಟಿಎಂಸಿಗಳಷ್ಟುನೀರು ಕಳೆದ ಒಂದು ವಾರದ ಅವಧಿಯಲ್ಲಿ ಕಡಿಮೆಯಾಗಿದ್ದು ಬಹುಪಾಲು ತಮಿಳುನಾಡಿನ ಕಡೆಗೆ ಹರಿದಿದೆ.

ಬೆಂಗಳೂರು (ಅ.12): ಸುಪ್ರೀಂ ಕೋರ್ಟ್‌ ಆದೇಶದಂತೆ ದಿನವೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನೇ ಕುಸಿಯುತ್ತಿದೆ. ಮಂಗಳವಾರ ಕಾವೇರಿಯ ನಾಲ್ಕು ಜಲಾಶಯಗಳ ಸಂಗ್ರಹ 25 ಟಿಎಂಸಿ ಇದ್ದು, ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹಿಂಗಾರು ಮಳೆಯಾಗದಿದ್ದರೆ ಕುಡಿಯುವ ನೀರಿಗೆ ತತ್ವಾರವಾಗಲಿದ್ದು, ಮುಂದಿನ ಮೇ ವರೆಗೂ ನೀರು ಲಭ್ಯತೆಯೇ ಕಷ್ಟವಾಗಲಿದೆ.

Add Asianetnews Kannada as a Preferred SourcegooglePreferred

ಅ.4ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದಂತೆ ಅ-.1ರಿಂದ 6ರವರೆಗೆ ತಮಿಳುನಾಡಿಗೆ 3.1 ಟಿಎಂಸಿ ನೀರು ಹರಿಸಲಾಗಿದ್ದು ಬಳಿಕ ಅ. 7ರಿಂದ ಪ್ರತಿದಿನವೂ 2 ಸಾವಿರ ಕ್ಯುಸೆಕ್‌ ಲೆಕ್ಕಾಚಾರದಂತೆ ನೀರು ಹರಿಸಲಾಗುತ್ತಿದೆ. ಅ.4ರ ವೇಳೆಗೆ ರಾಜ್ಯದ ಕಾವೇರಿ ಜಲಾಶಯಗಳಲ್ಲಿ 33.67 ಟಿಎಂಸಿ ನೀರಿನ ಸಂಗ್ರಹವಿದ್ದರೆ ಮಂಗಳವಾರ (ಅ.11) ಈ ಜಲಾಶಯಗಳಲ್ಲಿ ನೀರಿನ ಮಟ್ಟ25.09 ಟಿಎಂಸಿಗೆ ಕುಸಿದಿದೆ. ಒಟ್ಟು ಸುಮಾರು 8.58 ಟಿಎಂಸಿಗಳಷ್ಟುನೀರು ಕಳೆದ ಒಂದು ವಾರದ ಅವಧಿಯಲ್ಲಿ ಕಡಿಮೆಯಾಗಿದ್ದು ಬಹುಪಾಲು ತಮಿಳುನಾಡಿನ ಕಡೆಗೆ ಹರಿದಿದೆ.

ತಮಿಳುನಾಡಿಗೆ ಎಷ್ಟುನೀರು?:

ಸುಪ್ರೀಂ ಕೋರ್ಟ್‌ ಅ.4ರ ಆದೇಶದಂತೆ 1.10.2016ರಿಂದ 6.10.2016​ರವರೆಗೆ ಪ್ರತಿದಿನ 6 ಸಾವಿರ ಕ್ಯುಸೆಕ್‌ನಂತೆ, 7.10.2016 ರಿಂದ 18.10.2016ರವರೆಗೆ 2 ಸಾವಿರ ಕ್ಯುಸೆಕ್‌ನಂತೆ ಒಟ್ಟು 24 ಸಾವಿರ ಕ್ಯುಸೆಕ್‌ ನೀರು ಹರಿಸಬೇಕಿದೆ. ಈ ದಿನಗಳಲ್ಲಿ ತಮಿಳುನಾಡಿನ ಬಿಳಿಗುಂಡ್ಲು ಅಣೆಕಟ್ಟು ಮಾಪಕದಲ್ಲಿ 5.28 ಟಿಎಂಸಿ ನೀರು ದಾಖಲಾಗಬೇಕಿದ್ದು ಕಾವೇರಿ ಜಲಾಶಯಗಳಿಂದ ಕನಿಷ್ಟವೆಂದರೂ 6.5ರಿಂದ 7 ಟಿಎಂಸಿಗಳಷ್ಟುಬಿಡುಗಡೆ ಮಾಡಬೇಕಿದೆ. ರಾಜ್ಯದ ಕಾ ವೇರಿ ಜಲಾನಯನದ ಭಾಗಗಳಿಗೂ ನೀರು ಹರಿಸಲಾ ಗುತ್ತಿದ್ದು, ಒಟ್ಟು ನೀರಿನ ಪ್ರಮಾಣ 8.5 ಟಿಎಂಸಿಗಳಷ್ಟುಕಡಿಮೆಯಾಗಿದೆ. ಒಳಹರಿವಿನ ಪ್ರಮಾಣವೂ ಕಡಿಮೆ ಯಾಗಿರು​ವುದು ಒಳಹರಿವು, ಹೊರಹರಿವಿನ ನಡುವೆ ಭಾರಿ ಅಂತರವಿರುವುದು ನೀರು ಇಷ್ಟುಪ್ರಮಾ ಣ​ದಲ್ಲಿ ಕಡಿಮೆಯಾಗಲು ಕಾರಣವೆಂದು ತಜ್ಞರು ಹೇಳುತ್ತಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಇನ್ನೂ 7 ದಿನಗಳ ಕಾಲ ಪ್ರತಿದಿನ 2 ಸಾವಿರ ಕ್ಯುಸೆಕ್‌ನಂತೆ ಒಟ್ಟು 14 ಸಾವಿರ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿಸಬೇಕಿದೆ. ಅಂದರೆ 1.27 ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕಿದ್ದು, ಇದೇ ಪ್ರಮಾಣದ ಒಳ ಹರಿವಿದ್ದರೆ ಕಾವೇರಿ ಜಲಾಶ​ಯಗಳ ಸಂಗ್ರಹ ಇನ್ನಷ್ಟುಪ್ರಮಾಣದಲ್ಲಿ ಕುಸಿಯಲಿದೆ. ಕಳೆದ ಕೆಲ ದಿನಗಳಿಂದ ತೀವ್ರ ಒಣಹವೆ ಕಾವೇರಿ ಜಲಾನಯನ ಭಾಗದಲ್ಲಿರುವುದರಿಂದಲೂ ನೀರಿನ ಸಂಗ್ರಹದ ಮೇಲೂ ಪರಿಣಾಮ ಬೀರಲಿದೆ.

ಜಲಾಶಯ4 ಅಕ್ಟೋಬರ್‌11 ಅಕ್ಟೋಬರ್‌
ಕಾವೇರಿ ಜಲಾಶಯಗಳ ಸಂಗ್ರಹ(ಟಿಎಂಸಿಯಲ್ಲಿ)
ಹಾರಂಗಿ6.674.14
ಹೇಮಾವತಿ7.325.91
ಕೆಆರ್'ಎಸ್11.138.79
ಕಬಿನಿ8.557.06
ಒಟ್ಟು33.67

ಬೆಂಗಳೂರಿಗೇ 23 ಟಿಎಂಸಿ ನೀರು ಬೇಕು
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಜಲಾಶಯದ ಪ್ರದೇಶಗಳ ಜನರಿಗೆ ಕುಡಿಯುವ ನೀರೊದಗಿಸಲು ಒಟ್ಟು 23.05 ಟಿಎಂಸಿ ನೀರಿನ ಅಗತ್ಯತೆ ಇದೆಯೆಂದು ಸರ್ಕಾರವೇ ಸುಪ್ರಿಂಕೋರ್ಟ್‌ಗೆ ಮಾಹಿತಿ ನೀಡಿದೆ. ಈಗ ಇರುವ ನೀರಿನ ಸಂಗ್ರಹ 25 ಟಿಎಂಸಿಗಳಲ್ಲಿ ಇನ್ನೂ ಹರಿಸಬೇಕಾದ ನೀರಿನ ಸಂಗ್ರಹ ಅಂದಾಜಿಸಿದರೆ (1.27ಟಿಎಂಸಿ) ರಾಜ್ಯದ ಪಾಲಿಗೆ ಉಳಿಕೆಯಾಗುವುದು ಕುಡಿಯುವ ನೀರಿಗೆ ಸರಿ ಹೋಗುತ್ತದೆ. ಆದರೆ ಈ ನೀರಿನ ಮಟ್ಟಜಲಾಶಯಗಳ ಡೆಡ್‌ ಸ್ಟೋರೇಜ್‌ಅನ್ನೂ ಒಳಗೊಂಡಿದ್ದು, ಕುಡಿಯುವ ನೀರಿಗೂ ಈಗ ಇರುವ ಸಂಗ್ರಹ ಸಾಲದೇನೋ ಎನ್ನುವಂತಿದೆ. ಹಿಂಗಾರು ಮಳೆಯೊಂದೇ ರಾಜ್ಯಕ್ಕೆ ಆಸರೆಯಾಗಿದೆ. ಮುಂದಿನ ದಿನಗಳಲ್ಲಿ 15 ಟಿಎಂಸಿ ನೀರು ಸಂಗ್ರಹÜವಾಬಗಬಹುದೆಂಬ ನಿರೀಕ್ಷೆಯಿದೆ. ಒಂದೊಮ್ಮೆ ಮಳೆಯಾಗದೇ ಹೋದರೆ ರಾಜ್ಯದ ಕುಡಿಯುವ ನೀರಿಗೂ ಸಂಕಷ್ಟಸ್ಥಿತಿ ತಲೆದೋರಲಿದೆ. ಮಂಗಳವಾರ ದಿಂದ ಮಳೆಯಾಗುವ ಲಕ್ಷಣಗಳು ಗೋಚರಿಸಿದ್ದು, ಸ್ವಲ್ಪ ನೆಮ್ಮದಿ ಮೂಡಿಸಿದೆ.