ದರ್ಶನ್ ಸೇರಿ ಪ್ರತಿಷ್ಠಿತರಿಗೆ ಸೆ.26ಕ್ಕೆ ನೋಟಿಸ್
ಬೆಂಗಳೂರು (ಸೆ.24): ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್ ಎಸ್ ಆಸ್ಪತ್ರೆಗೆ ನೋಟಿಸ್ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಸರ್ಕಾರಿ ಖರಾಬು ಭೂಮಿ ಒತ್ತುವರಿ ಮಾಡಿ ದೊಡ್ಡವರಿಗೆ ಮುಂದಿನ 2 ದಿನಗಳಲ್ಲಿ ನೋಟಿಸ್ ನೀಡಿ ಚುರುಕು ಮುಟ್ಟಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ನಲ್ಲಿ 7 ಎಕರೆ 31 ಗುಂಟೆ ಸರ್ಕಾರಿ ಒತ್ತುವರಿ ಜಾಗವನ್ನ ವಶಕ್ಕೆ ಪಡೆಯಲು ನಿರ್ಧರಿಸಿರೊ ಜಿಲ್ಲಾಡಳಿತ ಸದ್ಯ ನೋಟಿಸ್ ನೀಡಲು ತೀರ್ಮಾನಿಸಿದೆ.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಒತ್ತುವರಿದಾರರಿಗೆ ಸೆ.26 ರಂದು ನೋಟಿಸ್ ನೀಡೊದನ್ನ ಖಚಿತ ಪಡಿಸಿದ್ದಾರೆ.
ಈ ಪ್ರಕಾರ ನಟ ದರ್ಶನ್ ಹಾಗೂ ಎಸ್ ಎಸ್ ಆಸ್ಪತ್ರೆಯೂ ಒತ್ತುವರಿ ಜಾಗದಲ್ಲಿದೆ ಅನ್ನೊದು ಸಾಬೀತಾಗಿದೆ.
ಸುವರ್ಣನ್ಯೂಸ್ ದಾಖಲೆ ಸಮೇತ ಒತ್ತುವರಿ ಬಗ್ಗೆ ವರದಿಯನ್ನು ಪ್ರಸಾರ ಮಾಡಿತು. ಸುವರ್ಣನ್ಯೂಸ್ ವರದಿಗೆ ಮೊದಲ ಇಂಪ್ಯಾಕ್ಟ್ ಸಿಕ್ಕಂತೆ ಆಗಿದೆ.