Asianet Suvarna News Asianet Suvarna News

ದರ್ಶನ್ ಸೇರಿ ಪ್ರತಿಷ್ಠಿತರಿಗೆ ಸೆ.26ಕ್ಕೆ ನೋಟಿಸ್

Notice to Darshan and others in Encroachment Case

ಬೆಂಗಳೂರು (ಸೆ.24): ಚಾಲೆಜಿಂಗ್ ಸ್ಟಾರ್​ ದರ್ಶನ್​ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್​ ಎಸ್ ಆಸ್ಪತ್ರೆಗೆ ನೋಟಿಸ್​ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಸರ್ಕಾರಿ ಖರಾಬು ಭೂಮಿ ಒತ್ತುವರಿ ಮಾಡಿ ದೊಡ್ಡವರಿಗೆ ಮುಂದಿನ 2 ದಿನಗಳಲ್ಲಿ ನೋಟಿಸ್ ನೀಡಿ ಚುರುಕು ಮುಟ್ಟಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್​ ಹೋಮ್ಸ್​ನಲ್ಲಿ 7 ಎಕರೆ 31 ಗುಂಟೆ ಸರ್ಕಾರಿ ಒತ್ತುವರಿ ಜಾಗವನ್ನ ವಶಕ್ಕೆ ಪಡೆಯಲು ನಿರ್ಧರಿಸಿರೊ ಜಿಲ್ಲಾಡಳಿತ ಸದ್ಯ ನೋಟಿಸ್ ನೀಡಲು ತೀರ್ಮಾನಿಸಿದೆ.

ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್​ ಒತ್ತುವರಿದಾರರಿಗೆ ಸೆ.26 ರಂದು ನೋಟಿಸ್ ನೀಡೊದನ್ನ ಖಚಿತ ಪಡಿಸಿದ್ದಾರೆ.

ಈ ಪ್ರಕಾರ ನಟ ದರ್ಶನ್​ ಹಾಗೂ ಎಸ್​ ಎಸ್​ ಆಸ್ಪತ್ರೆಯೂ ಒತ್ತುವರಿ ಜಾಗದಲ್ಲಿದೆ ಅನ್ನೊದು ಸಾಬೀತಾಗಿದೆ.

ಸುವರ್ಣನ್ಯೂಸ್ ದಾಖಲೆ ಸಮೇತ ಒತ್ತುವರಿ ಬಗ್ಗೆ ವರದಿಯನ್ನು ಪ್ರಸಾರ ಮಾಡಿತು. ಸುವರ್ಣನ್ಯೂಸ್ ವರದಿಗೆ ಮೊದಲ ಇಂಪ್ಯಾಕ್ಟ್ ಸಿಕ್ಕಂತೆ ಆಗಿದೆ. 

Latest Videos
Follow Us:
Download App:
  • android
  • ios