ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯಕ್ಕೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವಶ್ಯಕತೆ ಇಲ್ಲ. ಅಧ್ಯಕ್ಷ ಸ್ಥಾನದ ವಿಚಾರವಾಗಿ ಮುಖ್ಯಮಂತ್ರಿ ನನ್ನ ಪರ ಬ್ಯಾಟಿಂಗ್‌ ಮಾಡಿಲ್ಲ ಎಂದು ನಿಮಗೆ ಹೇಳಿದ್ದಾರೆಯೇ, ನೀವು ಆ ವಿಚಾರವನ್ನು ಅವರನ್ನೇ ಕೇಳಿಕೊಳ್ಳಿ' ಎಂದು ಡಿಕೆಶಿ ಪತ್ರಕರ್ತರಿಗೇ ಹೇಳಿದರು.

ರಾಮನಗರ: ‘ಕೆಪಿಸಿಸಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ. ನಾನು ಯಾರೊಂದಿಗೂ ರೇಸಿನಲ್ಲೂ ಇಲ್ಲ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯಕ್ಕೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವಶ್ಯಕತೆ ಇಲ್ಲ. ಅಧ್ಯಕ್ಷ ಸ್ಥಾನದ ವಿಚಾರವಾಗಿ ಮುಖ್ಯಮಂತ್ರಿ ನನ್ನ ಪರ ಬ್ಯಾಟಿಂಗ್‌ ಮಾಡಿಲ್ಲ ಎಂದು ನಿಮಗೆ ಹೇಳಿದ್ದಾರೆಯೇ, ನೀವು ಆ ವಿಚಾರವನ್ನು ಅವರನ್ನೇ ಕೇಳಿಕೊಳ್ಳಿ' ಎಂದು ಪತ್ರಕರ್ತರಿಗೇ ಹೇಳಿದರು.

‘ಮುಂದಿನ ವಿಧಾನಸಭಾ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯುತ್ತದೆ. ಡಿ.ಕೆ.ಸುರೇಶ್‌ ಸದ್ಯ ಸಂಸತ್‌ ಸದಸ್ಯರಾಗಿದ್ದು, ಅವರು ರಾಮನಗರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಸುವುದಿಲ್ಲ. ಕಾಂಗ್ರೆಸ್‌ನಿಂದ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಸುತ್ತೇವೆ' ಎಂದರು.