ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ಕೋರ್ಟ್‌ ಕೇಳಿದೆ, ವಕೀಲರು ಇದಕ್ಕೆ ಉತ್ತರಿಸಲಿದ್ದಾರೆ: ಸಿಎಂ

ಮಂಗಳೂರು (ಅ.10): ಗೋಕರ್ಣ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಳ್ಳುವ ಹಾಗೂ ರಾಮಚಂದ್ರಾಪುರ ಮಠಕ್ಕೆ ಆಡಳಿತಾ ಧಿಕಾರಿ ನೇಮಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ವಯ ಈ ವಿಚಾರ ಹೈ ಕೋರ್ಟ್‌ನಲ್ಲಿದೆ. ಅರ್ಜಿಯಲ್ಲಿ ಏನೇನು ಪ್ರಸ್ತಾಪವಾಗಿದೆ ಎಂಬುದು ನನಗೆ ತಿಳಿದಿಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ಕೋರ್ಟ್‌ ಕೇಳಿದೆ. ವಕೀಲರು ಇದಕ್ಕೆ ಉತ್ತರಿಸಲಿದ್ದಾರೆ. ನನ್ನ ನಿಲುವನ್ನು ತೀರ್ಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದರು.